About the Author

ವಿಜ್ಞಾನ ಸಾಹಿತ್ಯದಲ್ಲಿ ಅತ್ಯಂತ ಆಸ್ಥೆಯುಳ್ಳ ಟಿ. ಎಸ್. ಚನ್ನೇಶ್‌ ಅವರು ಬೆಂಗಳೂರಿನ ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ ನಲ್ಲಿ ಕೃಷಿ ವಿಜ್ಞಾನಿಯಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.  ಕೃಷಿಯಲ್ಲಿ ರೈತ ಸಮಸ್ಯೆಗಳನ್ನು ಜ್ವಲಂತವಾಗಿ ಚಿತ್ರಿಸಿದ ಕೃತಿ ‘ಉಳುವವರ ಪರ ವಕಾಲತ್ತು’. ‘ಅನುರಣನ’ ಅವರ ವಿಜ್ಞಾನ ಲೇಖನಗಳ ಸಂಕಲನ. ‘ನೊಬೆಲ್ 2017’ ಹಾಗೂ ‘ಅಮೃತಬಿಂದು’ ಅವರ ಕೃತಿಗಳು. 

ಟಿ.ಎಸ್. ಚನ್ನೇಶ್