ಉಳುವವರ ಪರ ವಕಾಲತ್ತು

Author : ಟಿ.ಎಸ್. ಚನ್ನೇಶ್

Pages 164

₹ 130.00




Year of Publication: 2016
Published by: ರೂಪ ಪ್ರಕಾಶನ
Address: ನಂ.2407, 2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್.ಮೊಹಲ್ಲಾ, ಮೈಸೂರು -570004
Phone: 9342274331

Synopsys

ರೈತ, ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದರೆ, ರೈತನ ಬೆನ್ನೆಲುಬು ಕಾರ್ಪೋರೇಟ್ ಹಿಡಿತಕ್ಕೆ ಸಿಕ್ಕು ನಲುಗುತ್ತಿರುವ ಬಗೆಯನ್ನು ಈ ಕೃತಿಯಲ್ಲಿ ತಮ್ಮದೇ ವಿಶಿಷ್ಟ ವಿಧಾನದ ಮೂಲಕ ಚಿತ್ರಿಸಿದ್ಧಾರೆ ಲೇಖಕರು.

ಕೃಷಿಗೆ ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೃಷಿ ಪರಿಕರಗಳ ಮೂಲಕ ಅವರನ್ನು ಅವಲಂಬಿತರನ್ನಾಗಿಸುತ್ತ, ತಮ್ಮ ಲಾಭದೆಡೆಗೆ ಲಾಭಿ ಮಾಡುವವರ ಹಾಗೂ ಜಾನಪದ ಕೃಷಿ ಪದ್ಧತಿಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಬೆಳಕು ಚೆಲ್ಲಿದ್ಧಾರೆ. ಇವುಗಳಿಗೆಲ್ಲ ಪರಿಹಾರವೆಂಬಂತೆ ಜನಪದ ಕೃಷಿ ಪದ್ಧತಿಯಲ್ಲಿರುವ, “ಚರಗ' ಮತ್ತು 'ದೀಪೋಳಿಗೆ' ಆಚರಣೆಗಳಲ್ಲಿರುವ ಸಮಗ್ರ ಕೀಟ ನಿರ್ವಹಣೆಯ ವಿಧಾನಗಳನ್ನು ಲೇಖನಗಳ ಮೂಲಕ ಕಟ್ಟಿಕೊಡಲಾಗಿದೆ.

About the Author

ಟಿ.ಎಸ್. ಚನ್ನೇಶ್

ವಿಜ್ಞಾನ ಸಾಹಿತ್ಯದಲ್ಲಿ ಅತ್ಯಂತ ಆಸ್ಥೆಯುಳ್ಳ ಟಿ. ಎಸ್. ಚನ್ನೇಶ್‌ ಅವರು ಬೆಂಗಳೂರಿನ ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ ನಲ್ಲಿ ಕೃಷಿ ವಿಜ್ಞಾನಿಯಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.  ಕೃಷಿಯಲ್ಲಿ ರೈತ ಸಮಸ್ಯೆಗಳನ್ನು ಜ್ವಲಂತವಾಗಿ ಚಿತ್ರಿಸಿದ ಕೃತಿ ‘ಉಳುವವರ ಪರ ವಕಾಲತ್ತು’. ‘ಅನುರಣನ’ ಅವರ ವಿಜ್ಞಾನ ಲೇಖನಗಳ ಸಂಕಲನ. ‘ನೊಬೆಲ್ 2017’ ಹಾಗೂ ‘ಅಮೃತಬಿಂದು’ ಅವರ ಕೃತಿಗಳು.  ...

READ MORE

Related Books