About the Author

"ನಗೋಲತೇ" ಕಾವ್ಯನಾಮದ ತೇಜಸ್ ಜಿ.ಎಲ್. ವಡ್ನಾಳ್ ಮೂಲತಃ ದಾವಣಗೆರೆಯವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಈಗಾಗಲೇ ಮೂರು ಕೃತಿಗಳನ್ನು ರಚಿಸಿದ್ದಾರೆ. ಮಂಗಳೂರಿನ ಶ್ರೀದೇವಿ ತಾಂತ್ರಿಕ ವಿದ್ಯಾಲಯದಲ್ಲಿ ಏರೋನಾಟಿಕಲ್ ಇಂಜಿನಿರಿಂಗ್‌ನಲ್ಲಿ ಬಿಇ ಪದವಿಯನ್ನು ಪಡೆದಿರುತ್ತಾರೆ. ಪೇಂಟಿಂಗ್, ಅಡುಗೆ ಮಾಡುವುದು, ತಬಲಾ ನುಡಿಸುವುದು, ಹಾಡು ಹೇಳುವುದು, ಕುದುರೆ ಸವಾರಿ ಮಾಡುವುದು, ಈಜುವುದು, ಚಾರಣ, ಕತೆ ಕಾದಂಬರಿ ಓದುವುದರ ಜೊತೆಗೆ ವಿಮಾನಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. 

ಕೃತಿಗಳು: ಮುಗಿಲ ಹೆಗಲ ಮೇಲೆ( ಕವನ ಸಂಕಲನ), ಮಣ್ಣಣ್ಣ ಮಾರಿ ಜಾತ್ರೆ(ಕಾದಂಬರಿ), ಬೆದ್ಲು ಬದ್ಕು(ಕಾದಂಬರಿ)

 

ತೇಜಸ್ ಜಿ.ಎಲ್. ವಡ್ನಾಳ್