About the Author

ಉದಿನೂರು ಮುಹಮ್ಮದ್‌ಕುಂಞ ಅವರು 1963 ರಲ್ಲಿಗಡಿನಾಡು ಕಾಸರಗೋಡು ಜಿಲ್ಲೆಯ ತ್ರಿಕಾರಿಪುರದ ಉದಿನೂರ್ ಎಂಬಲ್ಲಿ ಹುಟ್ಟಿದರು. ಮೂಲ ಶಿಕ್ಷಣವನ್ನು ಬೆಂಗಳೂರಿನ ಸಂತಜೋಸೆಫ್ ಶಾಲೆ ಮತ್ತು ಕಾಲೇಜಿನಿಂದ ಪಡೆದರು. ನಂತರ 23 ವರ್ಷ ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಸೌದಿ ವೈಟ್ ಸಿಮೆಂಟ್ ಕಂಪನಿಯಲ್ಲಿ ಕಾರ್ಯದರ್ಶಿಯಾಗಿ ದುಡಿದರು. ಸೌದಿ ಅರೇಬಿಯಾದ ಸಚಿವಾಲಯದ ಅಧೀನದಲ್ಲಿರುವ ಜಾಲತಾಣದಲ್ಲಿ ಭಾರತೀಯ ಭಾಷೆಗಳ ಅನುವಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಲ್ಲೇ ಸಾಹಿತ್ಯಾಸಕ್ತರಾಗಿದ್ದ ಅವರು ಮಲಯಾಳಂ ಭಾಷೆಗೆ ಎರಡು ಹಾಗೂ ಇಂಗ್ಲೀಷ್ ಗೆ ಒಂದು ಪುಸ್ತಕವನ್ನು ಅನುವಾದ ಮಾಡಿದ್ದಾರೆ. ಸೌದಿ ಅರೇಬಿಯಾ ಹಾಗೂ ಭಾರತದ ಹಲವಾರು ದಿನಪತ್ರಿಕೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.

ಕೃತಿಗಳು : ಕನ್ನಡ ಸಾಹಿತ್ಯದಲ್ಲಿ ಮುಸ್ಲಿಮ್‌ ಸಂವೇದನೆ

ಉದಿನೂರು ಮುಹಮ್ಮದ್‌ ಕುಂಞ