About the Author

ಯುವ ಬರಹಗಾರ ವಿ.ಹುಸೇನಿ ಅವರು ಜನಿಸಿದ್ದು 1998 ಏಪ್ರಿಲ್‌ 20ರಂದು. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಸಾವಲ್ಲೂರು ಇವರ ಹುಟ್ಟೂರು. ತಂದೆ ಕನಕಪ್ಪ, ತಾಯಿ ಈರಮ್ಮ. ಬಿ.ಎ. ಪದವೀದರರಾಗಿರುವ ಹುಸೇನಿ ಪ್ರಸ್ತುತ ಬಿ.ಎಡ್‌ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕಟ್ಟಿದ ಕನಸು (500 ನುಡಿಮುತ್ತುಗಳು), ತ್ರಿವೇಣಿ ಸಂಗಮ (ಆಧುನಿಕ ವಚನಗಳು) ಮುಂತಾದವು.

ವಿ. ಹುಸೇನಿ

(20 Apr 1998)