ತ್ರಿವೇಣಿ ಸಂಗಮ

Author : ವಿ. ಹುಸೇನಿ

Pages 70

₹ 75.00




Year of Publication: 2018
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಮಾನ್ವಿ
Phone: 8970147910

Synopsys

ಲೋಕದ ಡೊಂಕನ್ನು ತಿದ್ದುವ ಸಾಮರ್ಥ್ಯ ವಚನ ಚಳವಳಿಗೆ ಇದೆ ಎಂಬುದಕ್ಕೆ 12ನೇ ಶತಮಾನದ ವಚನ ಸಾಹಿತ್ಯವೇ ಸಾಕ್ಷಿಯಾಗಿದೆ. ಇಂತಹ ವಚನ ಪರಂಪರೆಯನ್ನು ಆಧುನಿಕ ಕಾಲದಲ್ಲಿ ವಾಸ್ತವದ ವಿದ್ಯಮಾನಕ್ಕೆ ಮುಖಾಮುಖಿಯಾಗಿಸಿ ಉತ್ತರಿಸುವ ಅಗತ್ಯವಿದೆ. ಕರ್ನೂಲ್‌ ಜಿಲ್ಲೆಯ ವಲ್ಲೂರಿನವರಾದ ವಿ. ಹುಸೇನಿ ಶ್ರೀ ಕನಕರಾಯ ಎಂಬ ಅಂಕಿತನಾಮದ ಮೂಲಕ ವರ್ತಮಾನದ ತಲ್ಲಣಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. 

ಮಾನವೀಯ ಪರಂಪರೆಯ ನಡುವೆ ವಚನ ಚಳವಳಿ ಹೆಜ್ಜೆ ಹೆಜ್ಜೆಗೆ ಮಾರ್ಮಿಕವಾಗಿ ನೆನಪಾಗುತ್ತದೆ. ವಚನ ಸಾಹಿತ್ಯ ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಧರ್ಮ, ರಾಜಕಾರಣ ಮತ್ತು ಧರ್ಮ ಸಂಘರ್ಷಗಳಿಗೆ ವಚನ ಉತ್ತರ ಮತ್ತು ನೀತಿಸಾರ ಮಾರ್ಗದರ್ಶನವಾಗಿದೆ. 

About the Author

ವಿ. ಹುಸೇನಿ
(20 April 1998)

ಯುವ ಬರಹಗಾರ ವಿ.ಹುಸೇನಿ ಅವರು ಜನಿಸಿದ್ದು 1998 ಏಪ್ರಿಲ್‌ 20ರಂದು. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಸಾವಲ್ಲೂರು ಇವರ ಹುಟ್ಟೂರು. ತಂದೆ ಕನಕಪ್ಪ, ತಾಯಿ ಈರಮ್ಮ. ಬಿ.ಎ. ಪದವೀದರರಾಗಿರುವ ಹುಸೇನಿ ಪ್ರಸ್ತುತ ಬಿ.ಎಡ್‌ ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕಟ್ಟಿದ ಕನಸು (500 ನುಡಿಮುತ್ತುಗಳು), ತ್ರಿವೇಣಿ ಸಂಗಮ (ಆಧುನಿಕ ವಚನಗಳು) ಮುಂತಾದವು. ...

READ MORE

Related Books