About the Author

ನಾರಾಯಣಸ್ವಾಮಿ.ವಿ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಬಂಡಹಟ್ಟಿ ಗ್ರಾಮದವರು. ತಂದೆ ವೆಂಕಟರಮಣಪ್ಪ, ತಾಯಿ ಚಿಕ್ಕಪಾಪಮ್ಮ. ಮಾಲೂರಿನ ಪ್ರಥಮದರ್ಜೆ ಕಾಲೇಜಿನಲ್ಲಿ  ಬಿ.ಎ , ಹಾಗೂ ತುಮಕೂರಿನ ವಿದ್ಯೋದಯಾ ಕಾನೂನು ಕಾಲೇಜಿನಲ್ಲಿ  ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಹಿತ್ಯಕ್ಕಾಗಿ ಚೆಳಕು ಸಂಸ್ಥೆಯಿಂದ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಮಂದಾರ ಸಾಂಸ್ಕೃತಿಕ  ವೇದಿಕೆ ಬೀದರ್ ಇವರಿಂದ ರಾಜ್ಯಮಟ್ಟದ ಕಾವ್ಯ ಚೂಡಾಮಣಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಕೃತಿ: ಮೌನದೊಳಗಣ ಭಾವ

ನಾರಾಯಣಸ್ವಾಮಿ ವಿ.

(21 Jul 1977)