About the Author

ಲೇಖಕ ವೇದಕುಮಾರ ಡಿ. ಪ್ರಜಾಪತಿ ಅವರ ಹುಟ್ಟೂರು ರೇವೂರು (ಬಿ). ತಂದೆ ದತ್ತಾತ್ರೇಯ ತಾಯಿ ನಾಗಮ್ಮ .ಸದ್ಯ, ಕಲಬುರಗಿಯಲ್ಲಿ ವಾಸವಿದ್ದು, ಉದಯೋನ್ಮುಖ ಬರಹಗಾರರ ಬಳಗ (ಕಲಬುರ್ಗಿ) ಮಾಜಿ ಅಧ್ಯಕ್ಷರು, ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವ ಕಾರ್ಯದರ್ಶಿ,  ಸದ್ಯ, ಗುಲ್ಬರ್ಗ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಕಚೇರಿ ಅಧೀಕ್ಷಕರಾಗಿದ್ದಾರೆ. ಬೀದಿ ನಾಟಕಗಳು ಸಾಕ್ಷರತಾ ಸೈಕಲ್ ಜಾಥಾ ದಲ್ಲಿ ಅನೇಕ ನಾಟಕಗಳನ್ನು ಪ್ರದರ್ಶಿಸಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಒಕ್ಕೂಟದ ಕೋಶ ಅಧ್ಯಕ್ಷ ಹಾಗೂ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು: ವೀರಭೈರ್ಜಿ , ಕಾಲಚಕ್ರ (ಈ ಎರಡೂ ನಾಟಕಗಳು ಗುಲಬರ್ಗಾ ಆಕಾಶವಾಣಿಯಿಂದ ಪ್ರಸಾರಿತ) 

 ಪ್ರಶಸ್ತಿ-ಪುರಸ್ಕಾರಗಳು: ಸುಭಾಶ್ಚಂದ್ರ  ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ. ವತಿಯಿಂದ ಗೌಡ ಪ್ರಶಸ್ತಿ ಲಭಿಸಿದೆ.
 

ವೇದಕುಮಾರ ಡಿ. ಪ್ರಜಾಪತಿ

(12 Jul 1973)