ವೀರ ಭೈರ್ಜಿ

Author : ವೇದಕುಮಾರ ಡಿ. ಪ್ರಜಾಪತಿ

Pages 60

₹ 35.00




Year of Publication: 2006
Published by: ಪಿಇಟಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ವೇದಕುಮಾರ್ ಪ್ರಜಾಪತಿ ಅವರು ಬರೆದ ನಾಟಕ ಕೃತಿ-ವೀರ ಭೈರ್ಜಿ. ದಿ.ಶರಣಪ್ಪ ಬೈರ್ಜಿ ಅವರು ತಮ್ಮ ಜೀವನವನ್ನು ಹೈದರಾಬಾದ್ ವಿಮೋಚನೆಗಾಗಿ ಮೀಸಲಿಟ್ಟಿದ್ದರು. ಸಾಮಾನ್ಯ ಪ್ರಜೆಯಾಗಿಯೂ ಸಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಆದರದಿಂದ ಕಾಣುವ ಮಹಾನ್ ವ್ಯಕ್ತಿ. ಈಗಿನ ಯುವಕರಲ್ಲಿ ದೇಶಾಭಿಮಾನ ಕಡಿಮೆಯಾಗುತ್ತಿದೆ. ಇದಕ್ಕೆ ದೇಶಭಕ್ತಿ ನಾಟಕಗಳು ಇನ್ನು ಹೆಚ್ಚು ಹುಟ್ಟಿಕೊಂಡರೆ ಯುವಪೀಳಿಗೆಗೆ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.ಎಂಬುದು ಈ ಕೃತಿಯ ಆಶಯ. ದಿ. ಶರಣಪ್ಪ ಬೈರ್ಜಿಯವರ  ಸಾಧನೆ ನಾಟಕ ಕೃತಿಯಲ್ಲಿ ಸೂಕ್ಷ್ಮವಾಗಿ ದಾಖಲಿಸಿದೆ. ಜನರಿಂದ, ಜನರಿಗಾಗಿ, ಹಾಡುತ್ತ ಬಂದಿರುವ ಜಾನಪದ ಹಾಡುಗಳು, ಭಜನೆ ಹಾಡುಗಳು, ಸಂತರ ಹಾಡುಗಳು ಅಳವಡಿಸಿಕೊಳ್ಳಲಾಗಿದೆ. ಈ ನಾಟಕದಲ್ಲಿ ಕೆಲವು ಪಾತ್ರಗಳ ಹೆಸರುಗಳು ಕಾಲ್ಪನಿಕವಾಗಿದ್ದು, ನಾಟಕ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಇರತಕ್ಕಂತ ಸನ್ನಿವೇಶಗಳನ್ನು ಬಳಸಿಕೊಂಡು ನಾಟಕರೂಪದಲ್ಲಿ ಚರಿತ್ರೆಯನ್ನು ಓದುಗರ ಮುಂದೆ ಇಡುವ ಪ್ರಯತ್ನವಿದು. 

About the Author

ವೇದಕುಮಾರ ಡಿ. ಪ್ರಜಾಪತಿ
(12 July 1973)

ಲೇಖಕ ವೇದಕುಮಾರ ಡಿ. ಪ್ರಜಾಪತಿ ಅವರ ಹುಟ್ಟೂರು ರೇವೂರು (ಬಿ). ತಂದೆ ದತ್ತಾತ್ರೇಯ ತಾಯಿ ನಾಗಮ್ಮ .ಸದ್ಯ, ಕಲಬುರಗಿಯಲ್ಲಿ ವಾಸವಿದ್ದು, ಉದಯೋನ್ಮುಖ ಬರಹಗಾರರ ಬಳಗ (ಕಲಬುರ್ಗಿ) ಮಾಜಿ ಅಧ್ಯಕ್ಷರು, ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವ ಕಾರ್ಯದರ್ಶಿ,  ಸದ್ಯ, ಗುಲ್ಬರ್ಗ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಕಚೇರಿ ಅಧೀಕ್ಷಕರಾಗಿದ್ದಾರೆ. ಬೀದಿ ನಾಟಕಗಳು ಸಾಕ್ಷರತಾ ಸೈಕಲ್ ಜಾಥಾ ದಲ್ಲಿ ಅನೇಕ ನಾಟಕಗಳನ್ನು ಪ್ರದರ್ಶಿಸಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಒಕ್ಕೂಟದ ಕೋಶ ಅಧ್ಯಕ್ಷ ಹಾಗೂ ಖಜಾಂಚಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು: ವೀರಭೈರ್ಜಿ , ಕಾಲಚಕ್ರ (ಈ ಎರಡೂ ನಾಟಕಗಳು ಗುಲಬರ್ಗಾ ಆಕಾಶವಾಣಿಯಿಂದ ಪ್ರಸಾರಿತ)   ಪ್ರಶಸ್ತಿ-ಪುರಸ್ಕಾರಗಳು: ಸುಭಾಶ್ಚಂದ್ರ  ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ. ...

READ MORE

Related Books