About the Author

ಲೇಖಕ ವೀರಭದ್ರಗೌಡ ಪಾಟೀಲರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದವರು. ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ನಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತರು. ಸದ್ಯ ವಕೀಲ ವೃತ್ತಿಯಲ್ಲಿದ್ದಾರೆ. ಇವರು ಬರೆದ ಲೇಖನಗಳು, ಶರಣರ ವಚನಗಳ ಸಾರಭರಿತ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೈದ್ಧಾಂತಿಕ ಅನುಭಾವಗಳಿಂದ ಪ್ರೇರಿತರಾದವರು. ಬ್ರಹ್ಮಾಕುಮಾರಿ ಶಿಕ್ಷಕಿ, ಸಹೋದರಿ ಉಷಾಜೀ ಅವರು ಹಿಂದಿ ಭಾಷೆಯಲ್ಲಿ ಬರೆದ ಕೃತಿಯನ್ನು ಇವರು ‘ಅಧ್ಯಾತ್ಮದೆಡೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ವೀರಭದ್ರಗೌಡ ಪಾಟೀಲ