About the Author

ಲೇಖಕ ವೆಂಕಟೇಶ ಕೆ. ಜನಾದ್ರಿ ಅವರು ಮೂಲತಃ ಕಲಬುರಗಿಯವರು. ತಂದೆ ಕೃಷ್ಣಪ್ಪ ಜನಾದ್ರಿ ತಾಯಿ ಸರಸ್ವತಿ. ಸ್ನಾತಕೋತ್ತರ ವಾಣಿಜ್ಯ ಪದವೀಧರರು. ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ, ಆಂತರ್ಯದ ಬಯಲು, ಅಂತರಂಗದೊಳಗಣ ಬಹಿರಂಗ, ನಡೆಯೊಳಗಣ ನುಡಿ, ಸತ್ಪಾತ್ರಕ್ಕೆ ಸಲ್ಲಿಸಯ್ಯ, ಒಡಲುಗೊಂಡವರಳಲು, ನಡೆದರೆ ಲಿಂಗಮೆಚ್ಚಿ, ಕೊರಡು ಕೊನರಿದಾಗ, ಎನ್ನಲ್ಲಿ ಏನುಂಟೆಂದು, ಕಥಾ ಸಂಕಲನಗಳು: ಹನಿಗಳ ನರ್ತನ,  ಮೌನದೊಳಗಣ ಕಥೆಗಳು, ಹೊರಮನದ ಒಳಬೇಗುದಿಗಳು. 

ಪ್ರಶಸ್ತಿ-ಪುರಸ್ಕಾರಗಳು: ಫ.ಗು.ಹಳಕಟ್ಟಿ ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಲಕ್ಷ್ಮೀ ಬಾಯಿ ಜಾಜಿ ಸ್ಮಾರಕ ದತ್ತಿ ಪ್ರಶಸ್ತಿ, ದೇವಾನಾಂಪ್ರೀಯ ಪ್ರಶಸ್ತಿ, ಅಡ್ವೆಸರ್ ಪತ್ರಿಕೆ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, 
ಡಾ. ದ.ರಾ.ಬೇಂದ್ರೆ ಪ್ರಶಸ್ತಿ, ಸುವರ್ಣಶ್ರೀ ಪ್ರಶಸ್ತಿ.
 

ವೆಂಕಟೇಶ ಕೆ. ಜನಾದ್ರಿ

(04 Jan 1968)