About the Author

ಡಾ. ವೈ. ಶಂಕರ ಪಾಟಾಳಿಯವರು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾ.ಪ್ರಭಾಕರ ಶಿಶಿಲ ಅವರರ ಮಾರ್ಗದರ್ಶನದಲ್ಲಿ 'ಪುಷೋದ್ಯಮ: ದ.ಕ. ಮತ್ತು ಉಡುಪಿ ಜಿಲ್ಲೆಗಳ ಒಂದು ತುಲನಾತ್ಮಕ ಅಧ್ಯಯನ' ಎಂಬ ವಿಷಯದಲ್ಲಿ ಪಿಹೆಚ್.ಡಿ ಪಡೆದಿದ್ದಾರೆ. ಎನ್.ಎಸ್.ಎಸ್. ಅಧಿಕಾರಿ, ವಾಗ್ಮಿ ಹಾಗೂ ಲೇಖಕರು, ಮಂಗಳೂರು ಮುಕ್ತ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಯಾಗಿ, ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ಬಿನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಇವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ತೋಟಗಾರಿಕೆ ಮತ್ತು ಪುಷೋದ್ಯಮ ಇವರ ನೆಚ್ಚಿನ ಹವ್ಯಾಸಗಳು.

ವೈ. ಶಂಕರ ಪಾಟಾಳಿ