About the Author

ಲೇಖಕಿ ಯಶಸ್ವಿನಿ ಕದ್ರಿ ಅವರು ಮೂಲತಃ ಮಂಗಳೂರಿನವರು. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವನಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಕಥೆಗಳು ಉದಯವಾಣಿ, ಕನ್ನಡ ಪ್ರಭ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಾಲೇಜು ಜೀವನದ ಕುರಿತಾದ ಲೇಖನಗಳು ಕಾಲೇಜು ಕಾಲಮ್ ಅಂಕಣದ ಮೂಲಕ ಉದಯವಾಣಿಯಲ್ಲಿ ಪ್ರಕಟಗೊಂಡಿವೆ.

ಪ್ರಶಸ್ತಿಗಳು: ಅ.ನ.ಕೃ. ಕಥಾ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಈ ಹೊತ್ತಿಗೆ ಕಥಾ ಪ್ರಶಸ್ತಿ, ಅಬಚೂರಿನ ಮಿತ್ರ ವೃಂದದ ಕಥಾ ಪ್ರಶಸ್ತಿ.

ಕೃತಿಗಳು: ಊರು ಹೇಳದ ಕಥೆ

ಯಶಸ್ವಿನಿ ಕದ್ರಿ