ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು

Author : ಕೆ. ಪುಟ್ಟಸ್ವಾಮಿ

Pages 150

₹ 60.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560088
Phone: 080-22107790

Synopsys

ಈ ಕೃತಿಯಲ್ಲಿ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ವೈವಿಧ್ಯಮಯವಾದ ದೃಷ್ಟಿಕೋನದೊಂದಿಗೆ ಲೇಖಕ ಕೆ. ಪುಟ್ಟಸ್ವಾಮಿ ದಿಗ್ದರ್ಶನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿದರು ಎಂಬ ಹಲವು ಅಣೆಪಟ್ಟಿಗಳನ್ನು ಬೇರೊಂದು ದೃಷ್ಟಿಕೋನದ ಮೂಲಕ ಓದುಗರಿಗೆ ಮನವರಿಕೆ ಮಾಡುವಲ್ಲಿ ಈ ಕೃತಿಯೂ ಸರಿಯೆನಿಸಿದೆ. ಆರಂಭದಿಂದಲೂ ಆಧುನಿಕತೆಯನ್ನು ವಿರೋಧಿಸುತ್ತಾ ಬಂದಿದ್ದ ಗಾಂಧೀಜಿ ಅವರು ಇದರಿಂದ ದೇಶಕ್ಕೆ ಹಲವು ನಷ್ಟವಾಗಲಿದೆ ಎಂದು ಮನಗಂಡು , ಅದನ್ನು ವಿರೋಧಿಸುತ್ತಾ ಬಂದಿದ್ದರು. ಗ್ರಾಮ ಸ್ವರಾಜ್ಯ ಗಾಂಧಿಯವರ ಕಲ್ಪನೆ, ವಿದೇಶಿ ವಸ್ತುಗಳಿಗೆ ಬಹಿಷ್ಕರಿಸಿ ,ದೇಶಿಯ ವಸ್ತುಗಳಿಗೆ ಆದ್ಯತೆ ನೀಡಿದ ಗಾಂಧಿಯವರ ಮರ್ಮ, ಇದರ ಮೂಲಕ ತಮ್ಮ ವೈಯುಕ್ತಿಕತೆಯನ್ನು, ಸ್ವಾಭಿಮಾನವನ್ನು , ನೆಲೆಗೊಳಿಸಲು ಯತ್ನಿಸಿದ ಬಗೆ ಎಲ್ಲವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಆಧುನಿಕತೆಯನ್ನು ವಿರೋಧಿಸುತ್ತಾ ಬಂದಿದ್ದ ಗಾಂಧಿಯವರು ತಮ್ಮ ಜೀವವನ್ನು ಯಾವ ರೀತಿಯಲ್ಲಿ ವೈಜ್ಞಾನಿಕತೆಗೆ ಪ್ರಭಾವಕ್ಕೆ ಒಳಪಟ್ಟಿತ್ತು ಎಂಬು‌ದನ್ನು ಈ ಕೃತಿಯೂ ವಿವರಿಸುತ್ತದೆ.

About the Author

ಕೆ. ಪುಟ್ಟಸ್ವಾಮಿ

ಕೆ.ಪುಟ್ಟಸ್ವಾಮಿ- ಹುಟ್ಟಿದ್ದು ಕನಕಪುರ ತಾಲೂಕಿನ ವರಗೆರಹಳ್ಳಿಯಲ್ಲಿ. ಕನಕಪುರ ಕೆ.ಜಿ.ಎಫ್ ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ.  ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ...

READ MORE

Related Books