ಜಾತಿ ಮೀಮಾಂಸೆ

Author : ಮೊಗಳ್ಳಿ ಗಣೇಶ್

Pages 360

₹ 300.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

’ಅಭಿನವ’ದ ಯು.ಆರ್. ಅನಂತಮೂರ್ತಿ ಗೌರವ ಮಾಲಿಕೆಯಲ್ಲಿ ಪ್ರಕಟವಾದ ೧೧ ಪುಸ್ತಕ ಮೊಗಳ್ಳಿಯವರ ’ಜಾತಿ ಮೀಮಾಂಸೆ’. ’ಜಾತಿ ಮೀಮಾಂಸೆ’ ಎಂಬ ಪ್ರಯೋಗ ಮೊದಲು ಬಳಸಿದವರು ಕೇರಳದ ನಾರಾಯಣ ಗುರುಗಳು. ಅರ್ಧ ಭಾಗ ಸಂಸ್ಕೃತದಲ್ಲೂ ಉಳಿದರ್ಧ ಮಲಯಾಳಂ ಭಾಷೆಯಲ್ಲೂ ಇರುವ ಅವರ 'ಜಾತಿ ಮೀಮಾಂಸಾ' ಎಂಬ ಪದ್ಯ ’ಜಾತಿಯೆಂದರೆ ಏನು ಎಂಬುದನ್ನು ಬಹಳ ಸರಳವಾಗಿ ಹಸುವೆಂಬುದು ಗೋವಿನ ಜಾತಿಗೆ ಸೇರುವಂತೆ ಮನುಷ್ಯ ಮನುಷ್ಯ ಜಾತಿಗೆ ಸೇರಿದ್ದಾನೆ' ಎಂದು ವಿವರಿಸುತ್ತದೆ. ತಮ್ಮ ಜೀವನದುದ್ದಕ್ಕೂ ಅವರು ಪ್ರತಿಪಾದಿಸಿದ ಕವಿತೆಯ ಜೊತೆಗೆ ಇದನ್ನು ಗ್ರಹಿಸಿದರೆ ಅವರು ನಡೆಸಿದ ಮಿಮಾಂಸೆಯ ಆಳ ತಿಳಿಯುತ್ತದೆ. ಅದ್ವೈತವನ್ನು ಕೇವಲ ಪಾಶ್ವಿಕ ಪರಿಕಲ್ಪನೆಯನ್ನಷ್ಟೇ ನೋಡದೆ ಮನುಷ್ಯ ಸಮಾನತೆಯ ಮಾರ್ಗವನ್ನಾಗಿ ಅವರು ಕಂಡಿದ್ದರು. ಮೊಗಳ್ಳಿಯವರ ’ಜಾತಿ ಮೀಮಾಂಸೆ’ ಆಧುನಿಕ ಜಾತಿಯ ಅನುಭವಗಳನ್ನು ಆಧುನಿಕ ಸಂದರ್ಭದಲ್ಲಿ ಹಿಡಿದಿಡುತ್ತದೆ. ಇಲ್ಲಿ ಸಾಹಿತ್ಯಕ ಸಂವೇದನೆಯಿಂದ ಆರಂಭಿಸಿ ರಾಜಕೀಯ ಸಂವೇದನೆಯ ತನಕ ವಿಸ್ತರಿಸಿರುವ ಇಲ್ಲಿನ ಬರಹಗಳು ದಲಿತತ್ವವನ್ನು ಕೇಂದ್ರವಾಗಿಟ್ಟುಕೊಂಡು ಜಾತೀಯ ಅನುಭವದ ವಿವಿಧ ಮಜಲುಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತವೆ. ಹಿಂದೊಮ್ಮೆ ಅನಂತಮೂರ್ತಿಯವರೇ ಹೇಳಿದಂತೆ `ತಕರಾರಿನ ಕವಿ ಮೊಗಳ್ಳಿ' ಇಲ್ಲಿ ಎತ್ತುವ ತಕರಾರುಗಳು ಆಯಾ ಬರಹದ ಸಂದರ್ಭವನ್ನು ಮಿಲಿ ನಿಂತು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE