ಮಾತು ತಲೆಎತ್ತುವ ಬಗೆ

Author : ರಹಮತ್ ತರೀಕೆರೆ

Pages 356

₹ 150.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583278

Synopsys

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಯೋಜನೆಯ ಹನ್ನೆರಡನೇ ಕೃತಿಯಿದು. ಕನ್ನಡಕ್ಕೆ ಕನ್ನಡದ್ದೇ ಆದ ಸಾಹಿತ್ಯ ಮೀಮಾಂಸೆ ಇದೆ. ಅದು ಸಂಸ್ಕೃತದ ಮತ್ತು ಪಾಶ್ಚಿಮಾತ್ಯ ಮೀಮಾಂಸೆಗಿಂತ ಭಿನ್ನ. ಅದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕರು ಬರೆದಿರುವ ಲೇಖನಗಳನ್ನು ಒಳಗೊಂಡಿರುವ ಸಂಕಲನವಿದು. ಕನ್ನಡ ಸಾಹಿತ್ಯ ಮೀಮಾಂಸೆಯ ಮೊದಲ ಸಂಪುಟ. ರಹಮತ್ ತರೀಕೆರೆ ಅವರು ಇದನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ. ಬಿ.ಎಂ. ಶ್ರೀಕಂಠಯ್ಯ, ದ.ರಾ.ಬೇಂದ್ರೆ, ಸೇಡಿಯಾಪು ಕೃಷ್ಣಭಟ್ಟ, ಕುವೆಂಪು, ಮಾಸ್ತಿ, ಅನಕೃ, ಪುತಿನ, ಕೀರ್ತಿನಾಥ ಕುರ್ತಕೋಟಿ, ಯು.ಆರ್. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಎಚ್.ಎಂ. ಚನ್ನಯ್ಯ, ದೇವನೂರ ಮಹಾದೇವ, ಜಿ.ಎಚ್. ನಾಯಕ, ಎಸ್.ಎಲ್. ಭೈರಪ್ಪ, ಬಿ.ಕೃಷ್ಣಪ್ಪ, ಡಿ.ಆರ್‍. ನಾಗರಾಜ, ಕೆ.ವಿ. ತಿರುಮಲೇಶ್, ಪಿ. ಲಂಕೇಶ್, ವಿಜಯಾ ದಬ್ಬೆ, ರಾಜೇಂದ್ರ ಚೆನ್ನಿ, ಚಂದ್ರಶೇಖರ ಪಾಟೀಲ, ಕೆ.ವಿ. ಸುಬ್ಬಣ್ಣ, ಬರಗೂರು ರಾಮಚಂದ್ರಪ್ಪ, ಸಾರಾ ಅಬೂಬಕ್ಕರ್ ಅವರ ಲೇಖನಗಳಿವೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books