ಸಾಂಸ್ಕೃತಿಕ ಪರಿಕಲ್ಪನೆಗಳು

Author : ಕೆ. ಕೇಶವ ಶರ್ಮ

Pages 582

₹ 400.00




Year of Publication: 2013
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಸಮಾಜಪರವಾದ ದೃಷ್ಠಿಯನ್ನು ಬೆಳೆಸಲು ಸಮಾಜಪರವಾದ ಜ್ಞಾನವೂ ಬೇಕು. ಸಾಮಾಜಿಕ ದೃಷ್ಟಿಯೂ ಸಮಗ್ರತೆಯ ಪರಿಶೀಲನೆಯಿಂದ ಮಾತ್ರ ಸಾಧ್ಯವಾಗುವಂತದ್ದು. ಒಂದು ಸಮಾಜದ ಹುಟ್ಟಿಗೆ ಬಹು ದೊಡ್ಡ ಚರಿತ್ರೆಯಿರುವಂತೆ, ಸಾಮಾಜಿಕ ಜ್ಞಾನವೆಂಬುದು ವ್ಯಾಪಕವಾದ ಅರ್ಥವನ್ನು ಪಡೆದುಕೊಂಡಿದೆ.

ಸಾಮಾಜಿಕ ನಡೆ-ನುಡಿಯು ತನಗೆ ಬೇಕಾದಂತೆ ವರ್ತಿಸುತ್ತದೆ. ಇದರಿಂದಾಗಿ ಸಾಮಾಜಿಕ ಮೌಲ್ಯ ವಿಶೇಷವಾಗಿ ರೂಪುಗೊಳ್ಳುತ್ತದೆ.

’ಸಾಂಸ್ಕೃತಿಕ ಪರಿಕಲ್ಪನೆಗಳು’ ಕೃತಿಯು ವೈದಿಕ ಸಂಸ್ಕೃತಿಯ ಹಿನ್ನಲೆಯಿಂದಲೂ ಆಧುನಿಕ ಅಂಶಗಳವರೆಗೆ ಚರ್ಚಿಸುವಂತಹ ವಿಷಯಗಳನ್ನು ಕುರಿತು ಪ್ರಸ್ತಾಪಿಸುತ್ತದೆ.

ಅಗ್ನಿ ಸಾಕ್ಷಿ, ಅಜ್ಞಾತವಾಸ, ಅತ್ಯಾಸಕ್ತ, ಅತಿಥಿ, ಕುಲ – ಗೋತ್ರಗಳು, ಕೇಶ ಸಂಸ್ಕಾರ, ಗಾಂಧರ್ವ ವಿವಾಹ, ಕೈಗಾರಿಕೆ, ಗ್ರಂಥಾಲಯ, ಗ್ರಾಮ ದೇವತೆ, ಜನಪದ, ಜಲದಾನ ಕ್ರಿಯೆ, ಚಾತುರ್ವರ್ಣ, ಚಾಂದ್ರಮಾನ, ಅಮಾತ್ಯರ ಬಗ್ಗೆ ಹೀಗೆ ಹಲವಾರು ಅಂಶಗಳನ್ನು ಈ ಕೃತಿ ತೆರೆದಿಡುತ್ತದೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books