ಶ್ಲೋಕಾಭಿರಾಮ

Author : ವಿಷ್ಣು ಜೋಷಿ

Pages 208

₹ 150.00




Year of Publication: 2017
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020
Phone: 09448110034

Synopsys

ನಿತ್ಯ ಬೆಳಗಿಗೊಂದು ಸುಭಾಷಿತ ಎಂಬ ಉಪಶೀರ್ಷಿಕೆಯೊಡನೆ ಲೇಖಕ ಪ್ರೊ. ವಿಷ್ಣು ಜೋಷಿ ಅವರು ಬರೆದ ‘ಶ್ಲೋಕಾಭಿರಾಮ’ ಕೃತಿಯು ಮಾನವೀಯ ಅಂತಃಕರಣವುಳ್ಳ ಯಾರಿಗೆ ಆಗಲಿ ಇಷ್ಟವಾಗುವ ಕೃತಿ. ಪ್ರತಿ ದಿನಾಲು ಬೆಳಿಗ್ಗೆ ತಮ್ಮ ದಿನವನ್ನು ಇಲ್ಲಿಯ ಒಂದೊಂದು ಸುಭಾಷಿತದ ಮನನ ಮಾಡುವ ಮೂಲಕವೇ ಆರಂಭಿಸಬಹುದು. ಆ ಮೂಲಕ ಜೀವನ ನೆಮ್ಮದಿಗೆ ಒಂದು ಸೂಕ್ತ ಮಾರ್ಗ ಕಂಡುಕೊಳ್ಳಬಹುದಾಗಿದೆ.

About the Author

ವಿಷ್ಣು ಜೋಷಿ

ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ  ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು.  ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...

READ MORE

Related Books