ಶ್ರೀರಂಗ ಸಂಪದ

Author : ಎಚ್.ವಿ. ವೆಂಕಟಸುಬ್ಬಯ್ಯ

Pages 624

₹ 710.00




Year of Publication: 2017
Published by: ಸಿರಿವರ ಪ್ರಕಾಶನ
Address: ಸಿರಿವರ ಪ್ರಕಾಶನ, ಬೆಂಗಳೂರು

Synopsys

ಕನ್ನಡ ರಂಗಪರಂಪರೆಯ ಆಗ್ರಗಣ್ಯ ನಾಟಕಕಾರ ಮತ್ತು ಸಂಸ್ಕೃತ ವಿದ್ವಾಂಸ ಶ್ರೀರಂಗಾಚಾರ್ಯ ಜೀವನ ಮತ್ತು ಸಾದನೆಗಳನ್ನು ಹಂತ ಹಂತವಾಗಿ ವಿವರಿಸಲಾಗಿದೆ.ನಾಡಿನ ವಿವಿಧ ಹೆಸರಾಂತ ಸಾಹಿತಿಗಳು, ವಿಮರ್ಶಕರು ಶ್ರೀರಂಗರ ಬದುಕು ಮತ್ತು ಬರವಣಿಗೆಯನ್ನು ತನ್ನ ನೇರ ಅನುಭವದ ಮೂಲಕ ವಿವರಿಸಿದ್ದಾರೆ. ಮೂರು ಭಾಗಗಳಲ್ಲಿ ಈ ಕೃತಿ ರೂಪುಗೊಂಡಿದ್ದು, ಮೊದಲ ಭಾಗದಲ್ಲಿ ಶ್ರೀರಂಗರ ಕೃತಿಗಳ ಪರಿಚಯ ಮತ್ತು ವಿಮರ್ಶಿಸುವ ಕೆಲಸ ನಡೆದಿದೆ. ಜಿ.ಎಸ್. ಅಮೂರ, ಸ.ಸ.ಮಾಳವಾಡ, ವಿ.ಎಂ.ಇನಾಂದಾರ್, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ, ವಿ.ಸೀತಾರಾಮಯ್ಯ, ರಂ.ಶ್ರೀ.ಮುಗಳಿ, ಟಿ.ಪಿ.ಆಶೋಕ, ಎಸ್.ಎಲ್.ಭೈರಪ್ಪ, ಅ.ರಾ.ಮಿತ್ರ ಮತ್ತಿತರರು ಶ್ರೀರಂಗರ ಕೃತಿಗಳನ್ನು ನೋಡಲು ಕೈಮರವಾಗಿದ್ದಾರೆ. - ಇನ್ನು ಎರಡನೇ ಭಾಗದಲ್ಲಿ ವ್ಯಕ್ತಿಯಾಗಿ ಶ್ರೀರಂಗರು ಹೇಗೆ, ಅವರ ಸಾಧನೆ ಏನು ಎಂಬುದನ್ನು ನೆಗಳೂರು ರಂಗನಾಥ, ಪ್ರಸನ್ನ, ನಾರಾಯಣ ರಾಯಚೂರ್, ಶಶಿ ದೇಶಪಾಂಡೆ, ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತಿತರ ಲೇಖಕರು ಪರಿಚಯಿಸಿದ್ದಾರೆ. ಮೂರನೇ ಭಾಗದಲ್ಲಿ ಶ್ರೀರಂಗರೊಂದಿಗಿನ ಸಂದರ್ಶನ ಮತ್ತು ಅವರಿಗೆ ಸಂಬಂಧಿಸಿದ ಬರಹಗಳಿವೆ. ಡಾ.ವಿಜಯಾ, ಎಚ್.ಎಸ್. ಪಾರ್ವತಿ, ಎಚ್ಚೆಸ್ಕೆ, ವೈಕುಂಠ ರಾಜು, ಬಿ.ವಿ.ಕಾರಂತರ ಬರಹಗಳಿವೆ. ಮತ್ತು ಇದೇ ವಿಭಾಗದಲ್ಲಿ ಶ್ರೀರಂಗರ ಬಿಡಿಬಿಡಿ ಬರಹಗಳನ್ನೂ ದಾಖಲಿಸಲಾಗಿದೆ.

About the Author

ಎಚ್.ವಿ. ವೆಂಕಟಸುಬ್ಬಯ್ಯ

ಕನ್ನಡ ರಂಗಭೂಮಿಯಲ್ಲಿ ’ಸುಬ್ಬಣ್ಣ’ ಎಂದೇ ಜನಪ್ರಿಯರಿರುವ ಎಚ್.ವಿ. ವೆಂಕಟಸುಬ್ಬಯ್ಯ ಅವರು ಹುಟ್ಟಿದ್ದು 1936ರಲ್ಲಿ. ಮೂಲತಃ ಮೈಸೂರಿನ ಹಂಪಾಪುರದವರಾದ ವೆಂಕಟಸುಬ್ಬಯ್ಯ ಅವರು ಸೌಂಡ್ ಎಂಜಿನಿಯರಿಂಗ್ ಮತ್ತು ನಾಟಕ ಕಲೆಯಲ್ಲಿ ಡಿಪ್ಲೊಮಾ ಮಾಡಿದ್ದರು. ಎಲ್.ಆರ್. ಡಿ.ಇ.ಯಲ್ಲಿ ತಾಂತ್ರಿಕ ಅಧಿಕಾರಿಯಾಗಿ 1996ರ ತನಕ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವೆಂಕಟಸುಬ್ಬಯ್ಯ ಅವರಿಗೆ 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. 1950ರಿಂದ ಕನ್ನಡ ರಂಗಭೂಮಿಯ ಭಾಗವಾಗಿರುವ ಹಿರಿಯ ರಂಗಕರ್ಮಿ ’ಸುಬ್ಬಣ್ಣ’ ಅವರು ರಂಗಭೂಮಿ, ರಂಗಭೂಮಿಯ ಕಲಾವಿದರು, ರಂಗಭೂಮಿಯ ತಂತ್ರಜ್ಞಾನ ಕುರಿತ ಯಾವುದೇ ಪ್ರಶ್ನೆಗೂ ಸುದೀರ್ಘ ಉತ್ತರ ನೀಡಬಲ್ಲರು. ಪ್ರದರ್ಶನ ಕಲೆಗಳ ಅಭಿವ್ಯಕ್ತಿಯ ಸೃಜನಶೀಲತೆ ಮತ್ತು ...

READ MORE

Related Books