ಲುಂಬಿನಿ ಪ್ರಕಾಶನ ಲೇಖಕ ಮೋದೂರು ತೇಜ ಅವರು 2020ರಲ್ಲಿ ಆರಂಭಿಸಿದ ಪ್ರಕಾಶನ. ಈ ಪ್ರಕಾಶನ ಕನ್ನಡ ಸಾಹಿತ್ಯ ಜಗತ್ತಿಗೆ ಇದೀಗ ತಾನೆ ಅಂಬೆಗಾಲಿರಿಸಿದೆ. ಹೊಸದನ್ನು ಕಾಣುವ, ಕಟ್ಟುವ, ಕಾಣ್ಕೆಯೊಂದಿಗೆ. ಬಹುತ್ವದ ಮಹತ್ವವನ್ನು, ವೈಚಾರಿಕತೆಯನ್ನು, ಜೀವಪರವಾದ ಚಿಂತನೆಯುಳ್ಳ ಕೃತಿಗಳನ್ನು ಓದುಗರಿಗೆ ತಲುಪಿಸ ಬೇಕೆಂಬ ಹಂಬಲದೊಂದಿಗೆ. ಕನ್ನಡ ನಾಡಿನ ಸಾರಸ್ವತ ಲೋಕದ ಅನೇಕ ಹಿರಿಯ ಕಿರಿಯ ಹಾಗೂ ಸಮಕಾಲೀನ ಬರಹಗಾರರು ನಮ್ಮನ್ನು ಪ್ರೀತಿಯಿಂದ ಬೆಂಬಲಿಸುತ್ತಾರೆ ಎಂಬ ಬಯಕೆಯೊಂದಿಗೆ. ಕನ್ನಡ ಸಾಹಿತ್ಯದ ಪರಿಚಾರಿಕೆಗಾಗಿ ಆರಂಭಿಸಿರುವುದಾಗಿ ಪ್ರಕಾಶಕರು ತಿಳಿಸಿದ್ದಾರೆ
©2024 Book Brahma Private Limited.