About the Author

ಕವಿ ಆರನಕಟ್ಟೆ ರಂಗನಾಥ ಅವರು 1985 ಜುಲೈ 15ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯಲ್ಲಿ ಜನಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ‘ಕನ್ನಡ ಮತ್ತು ತಮಿಳು ದಲಿತ ಕತೆಗಳಲ್ಲಿ ಪ್ರತಿಭಟನೆ’ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ವೃತ್ತಿ ಆರಂಭ.
ಪ್ರಜಾವಾಣಿ, ವಿಜಯ ಕರ್ನಾಟಕ, ಸಂವಾದ, ಅನಿಕೇತನ( ಸಾ.ಅಕಾಡೆಮಿ ಪತ್ರಿಕೆ), ಅವಧಿ, ಮೊದಲಾದ ಪತ್ರಿಕೆಗಳಲ್ಲಿ ಇವರ ಪದ್ಯಗಳು ಪ್ರಕಟಣೆ ಕಂಡಿವೆ. ತಮಿಳಿನಿಂದ ಕನ್ನಡಕ್ಕೆ ಅನೇಕ ಲೇಖನಗಳು, ಕವಿತೆಗಳನ್ನು ಅನುವಾದಿಸಿದ್ದು ನಾಡಿನ ಹಲವು ಪತ್ರಿಕೆ ಮತ್ತು ವೆಬ್ಸೈಟ್ ಗಳಲ್ಲಿ ಪ್ರಕಟಗೊಂಡಿವೆ. 2016ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಆರನಕಟ್ಟೆ ರಂಗನಾಥ