About the Author

ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದರು ಮಂಗಳೂರಿನ ಬಿಜೈಯಲ್ಲಿ ಪ್ರಾಥಮಿಕ ಶಿಕ್ಷಣ, ಕೆನರಾ ಹೈಸ್ಕೂಲಿನಲ್ಲಿ ಹೈಸ್ಕೂಲು ಶಿಕ್ಷಣ, ನಂತರ ವಿವಿಧೆಡೆ ಬೇರೆಬೇರೆ ಉದ್ಯೋಗಗಳನ್ನು ನಿರ್ವಹಿಸಿದವರು. ಮಂಗಳೂರಿನ 'ನವಭಾರತ' ದೈನಿಕದಲ್ಲಿ ಉಪಸಂಪಾದಕರಾಗಿದ್ದರು. 'ಜನಸೇವಕ' ಎಂಬ ಸಾಪ್ತಾಹಿಕ ನಡೆಸುತ್ತಿದ್ದರು. 

ಸಾಹಿತಿ ದಿನಕರ ದೇಸಾಯಿ ಅವರ ಒಡನಾಡಿಗಳು. 'ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ’ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಶಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಗೌರವಗಳು ಸಂದಿವೆ. 

ಅಮ್ಮೆಂಬಳ ಆನಂದ