About the Author

ಕವಿ, ಬರಹಗಾರ ಬಾಲಕೃಷ್ಣ ಬೇರಿಕೆಅವರು ಪುತ್ತೂರು ತಾಲೂಕು ಪಾಣಾಜೆ ಗ್ರಾಮದ, ಬೆಳ್ತಂಗಡಿ ತಾಲೂಕು ಕೊಯೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ. ಅವರ ಕನ್ನಡ ಮತ್ತು ತುಳು ಬರಹಗಳು ಹಲವು ಪತ್ರಿಕೆ, ಅಭಿನಂದನ ಸಂಪುಟ, ಸ್ಮರಣ ಸಂಚಿಕೆ, ಸಾಹಿತ್ಯ ವಾಚಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ದ.ರಾ. ಬೇಂದ್ರೆ ಸ್ಮತಿ ಕವನ ಸ್ಪರ್ಧೆ, ಮಣಿಪಾಲ ಸಾಹಿತ್ಯ ಸಂಘದ ಟಿ.ಎಂ.ಎ.ಪೈ ಸ್ಮಾರಕ ಕಾವ್ಯ ಸರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡ ಅನುಭವ. ಕವನ ಸಂಕಲನ-'ಸ್ಪರ್ಶ', 'ಸ್ಥಿತ', 'ಎದೆ ಮುಗಿಲ ಆಕಾಶ'. ಹನಿಗವನ ಸಂಕಲನ-'ಹೆಸರಿರದ ಹೂವು', ಸಂಪಾದಿತ ಅಂಚೆಕಾರ್ಡು ಕತೆಗಳ ಸಂಕಲನ -’ಅಂಬೆಗಾಲು'.

ಬಾಲಕೃಷ್ಣ ಬೇರಿಕೆ