About the Author

.ಬಸವರಾಜ ಸೂಳಿಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೂಡಗಿ ಗ್ರಾಮದವರು. ಆದರೆ ಈಗ ಧಾರವಾಡ ನಿವಾಸಿ. ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವೀಧರರು. ‘ಲಡಾಯಿ’ ಎಂಬ ವಾರಪತ್ರಿಕೆ ಆರಂಭಿಸಿದ್ದರು. ಸದ್ಯ ಲಡಾಯಿ ಪ್ರಕಾಶನ ನಡೆಸುತ್ತಿದ್ದಾರೆ.  ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ತೇವ ಕಾಯುವ ಬೀಜ-ಇವರ ಕವನ ಸಂಕಲನ.ಗೌರಿ ನೋಟ (ಲೇಖನಗಳ ಸಂಪಾದನಾ ಕೃತಿ). 

ಬಸವರಾಜ ಸೂಳಿಭಾವಿ (ಬಸೂ)