About the Author

ಲೇಖಕ ಭೀಮರಾಯ ಹೇಮನೂರು. ‘ಭೀಜಿ’ ಎಂಬುದು ಇವರ ಕಾವ್ಯನಾಮ. ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹೇಮನೂರು ಗ್ರಾಮದವರು. ಬಿ.ಕಾಂ ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಅಫಜಲಪುರದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆ ನಿರ್ವಹಿಸುತ್ತಿದ್ದಾರೆ. 

ಕೃತಿಗಳು: ಮುಳ್ಳು ಚೆಲ್ಲಿದ ಹಾದಿಗೆ.. (ಕವನ ಸಂಕಲನ) ಈ ಕೃತಿಗೆ ಕಲಬುರಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ 2019ನೇ ಕಾವ್ಯ ವಿಭಾಗದಲ್ಲಿ ಪ್ರಶಸ್ತಿ, .2020ರ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯಲ್ಲಿ ಆಕಾಶವಾಣಿ ಆಯೋಜಿತ  ರಾಷ್ಟ್ರಮಟ್ಟದ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕವನ ವಾಚಿಸಿದ್ದರು. ‘ಯಾರು ಒಳ್ಳೆಯವರು ಯಾರು ಕೆಟ್ಟವರು’ (ನಾಟಕ)

ಭೀಮರಾಯ ಹೇಮನೂರು