About the Author

ಸಿ.ಕೆ. ರೇಣುಕಾರ್ಯ ಹುಟ್ಟಿದ್ದು ಚಾಮರಾಜನಗರದಲ್ಲಿ (1943). ವಿದ್ಯಾಭ್ಯಾಸ ಮೈಸೂರು ಮತ್ತು ಅಮೆರಿಕಗಳಲ್ಲಿ, 'ಸಹಕಾರ ಚಳುವಳಿಗಳು' ಕುರಿತ ಮಹಾಪ್ರಬಂಧಕ್ಕೆ ಮೈಸೂರು ವಿವಿಯ ಡಾಕ್ಟರೇಟ್ ಪದವಿ. ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾಗಿ ಕೆಲಸ, ಅಮೆರಿಕ, ಯು.ಕೆ., ಚೈನಾ, ಜಪಾನ್, ಕೆನಡಾ ಮುಂತಾದ ದೇಶಗಳಲ್ಲಿ ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ ಹಾಗೂ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ, ಈಗ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು. ಅರ್ಥಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸುಮಾರು 42 ಪುಸ್ತಕಗಳು ಪ್ರಕಟಗೊಂಡಿವೆ. 'ಆರ್ಥಿಕ ಚಿಂತನೆಯ ಹೊಂಗಿರಣ' ಈವರೆವಿಗೆ 13 ಮುದ್ರಣಗಳನ್ನು ಕಂಡಿದೆ. ಸದ್ಯ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ.

ಸಿ.ಕೆ. ರೇಣುಕಾರ್ಯ