ಅರ್ಥಶಾಸ್ತ್ರದ ಮೂಲತತ್ವಗಳು

Author : ಸಿ.ಕೆ. ರೇಣುಕಾರ್ಯ

Pages 456

₹ 250.00




Year of Publication: 2010
Published by: ಶ್ರುತಿಲೋಕ ಪ್ರಕಾಶನ
Address: ನಂ. 2384, 3ನೇ ಮುಖ್ಯರಸ್ತೆ, 5ನೇ ಕ್ರಾಸ್‌, ಹೊಸ ಕಾಂತೇರಾಜೇ ಅರಸು ರಸ್ತೆ, ಮೈಸೂರು- 09
Phone: 9008798406

Synopsys

ಲೇಖಕ ಡಾ.ಸಿ.ಕೆ.ರೇಣುಕಾರ್ಯ ಅವರ ಲೇಖನ ಕೃತಿ ʼಅರ್ಥಶಾಸ್ತ್ರದ ಮೂಲತತ್ವಗಳುʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, “ಅರ್ಥಶಾಸ್ತ್ರದ ಮೂಲತತ್ವಗಳನ್ನು ಪರಿಚಯ ಮಾಡಿಕೊಡುವುದು ಈ ಗ್ರಂಥದ ಮುಖ್ಯ ಉದ್ದೇಶ. ಈ ದೃಷ್ಟಿಯಿಂದ, ಗ್ರಂಥವನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಮೊದಲನೆಯ ಭಾಗದಲ್ಲಿ ಅಂಶಲಕ್ಷಿ ಆರ್ಥಿಕ ವಿಶ್ಲೇಷಣೆಯನ್ನು ನಿರೂಪಿಸಲಾಗಿದೆ. ಎರಡನೇ ಭಾಗದಲ್ಲಿ ಸಮಗ್ರಲಕ್ಷಿ ಆರ್ಥಿಕ ವಿಶ್ಲೇಷಣೆಯನ್ನು ನಿರೂಪಿಸಲಾಗಿದೆ. ಅರ್ಥಶಾಸ್ತ್ರದ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಈ ಗ್ರಂಥವನ್ನು ರಚಿಸಲಾಗಿದೆ. ಅಂಶಲಕ್ಷ್ಮಿ ಹಾಗೂ ಸಮಗ್ರಲಕ್ಷಿ ಆರ್ಥಿಕ ವಿಶ್ಲೇಷಣೆಗಳಿಗೆ ಗಣಿತದ ಜ್ಞಾನ ತುಂಬಾ ಆವಶ್ಯಕ. ವಾಸ್ತವವಾಗಿ ಗಣಿತೀಯ ಭಾಷೆಯಲ್ಲೇ ಇವೆರಡರ ವಿಶ್ಲೇಷಣೆ ಇಂದು ವ್ಯಾಪಕವಾಗಿ ನಡೆಯುತ್ತಿದೆ. ಈ ಗ್ರಂಥದಲ್ಲಿ ಅಷ್ಟಾಗಿ ಗಣಿತವನ್ನು ಬಳಸಿಲ್ಲ. ಸಾಧ್ಯವಾದಷ್ಟು ಸರಳವಾಗಿ, ಆರ್ಥಿಕ ತತ್ವಗಳನ್ನು ನಿರೂಪಿಸುವ ಯತ್ನವನ್ನು ನಡೆಸಲಾಗಿದೆ. ಈ ಗ್ರಂಥದಲ್ಲಿ ಚರ್ಚಿಸುವುದರಿಂದಾಚೆಗೆ ಬಹಳವಾಗಿ ಆರ್ಥಿಕ ತತ್ವಗಳಿಗೆ ಸಂಬಂಧಿಸಿದ ಸಾಹಿತ್ಯ ಬೆಳೆದಿದೆ. ಆದ್ದರಿಂದ ಈ ಗ್ರಂಥ ಅರ್ಥಶಾಸ್ತ್ರದ ಎಲ್ಲ ಮೂಲ ತತ್ವಗಳನ್ನೂ ಪರಿಚಯಿಸುವುದಿಲ್ಲ. ಅದು ಈ ಗ್ರಂಥದ ಮಿತಿಯೂ ಹೌದು. ಇದರ ತಿಳುವಳಿಕೆಯಲ್ಲಿ ಆಸಕ್ತಿ ಇರುವವರು ಆಂಗ್ಲ ಭಾಷೆಯಲ್ಲಿ ಈ ಕ್ಷೇತ್ರದಲ್ಲಿ ಪ್ರಕಟವಾಗಿರುವ ಗ್ರಂಥಗಳನ್ನೇ ಮೊರೆ ಹೋಗಬೇಕು. ಇದು ತೀರ ಅನಿವಾರ್ಯ. 

About the Author

ಸಿ.ಕೆ. ರೇಣುಕಾರ್ಯ

ಸಿ.ಕೆ. ರೇಣುಕಾರ್ಯ ಹುಟ್ಟಿದ್ದು ಚಾಮರಾಜನಗರದಲ್ಲಿ (1943). ವಿದ್ಯಾಭ್ಯಾಸ ಮೈಸೂರು ಮತ್ತು ಅಮೆರಿಕಗಳಲ್ಲಿ, 'ಸಹಕಾರ ಚಳುವಳಿಗಳು' ಕುರಿತ ಮಹಾಪ್ರಬಂಧಕ್ಕೆ ಮೈಸೂರು ವಿವಿಯ ಡಾಕ್ಟರೇಟ್ ಪದವಿ. ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾಗಿ ಕೆಲಸ, ಅಮೆರಿಕ, ಯು.ಕೆ., ಚೈನಾ, ಜಪಾನ್, ಕೆನಡಾ ಮುಂತಾದ ದೇಶಗಳಲ್ಲಿ ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ ಹಾಗೂ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ, ಈಗ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು. ಅರ್ಥಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸುಮಾರು 42 ಪುಸ್ತಕಗಳು ಪ್ರಕಟಗೊಂಡಿವೆ. 'ಆರ್ಥಿಕ ಚಿಂತನೆಯ ಹೊಂಗಿರಣ' ಈವರೆವಿಗೆ 13 ...

READ MORE

Related Books