About the Author

ದೇಶಿ ಕ್ರಿಕೆಟ್ ಅಂಕಿ ಅಂಶ ಬರಹಗಾರರಾಗಿ ಗುರುತಿಸಿಕೊಂಡಿರುವ ಚೆನ್ನಗಿರಿ ಕೇಶವಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ‘ಆನಂದ್ ಜಿ ಡೊಸ್ಸಾ’ ಪ್ರಶಸ್ತಿ ನೀಡಿ ಗೌರವಿಸಿದೆ. 2017ನೇ ಸಾಲಿನಲ್ಲಿ ಅವರು ಬರೆದ ಕ್ರಿಕೆಟ್ ಸ್ಟ್ಯಾಟ್ಸ್ ಜರ್ನಲ್ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್ ಅಂಕಿಅಂಶಗಳನ್ನು ಬರೆಯುತ್ತಾರೆ. ಅಲ್ಲದೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ‘ಭಾರತ ರತ್ನ ಸಚಿನ್ ತೆಂಡೊಲ್ಕರ್’ ಕೃತಿ ಹೆಚ್ಚು ಜನಪ್ರಿಯವಾಗಿದೆ. ಈ ಕೃತಿಗೆ ಸ್ವತಃ ಸಚಿನ್ ತೆಂಡೊಲ್ಕರ್ ಮುನ್ನುಡಿ ಬರೆದಿದ್ದಾರೆ

ಚೆನ್ನಗಿರಿ ಕೇಶವಮೂರ್ತಿ