About the Author

ಹಂಪಿಯ ಕನ್ನಡ ವಿ.ವಿ. ಬುಡಕಟ್ಟು ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರು-ಡಾ.ಗಂಗಾಧರ ದೈವಜ್ಞ. 1964 ರ ಅ. 23 ರಂದು ಜನನ. ಜಾನಪದ, ಬುಡಕಟ್ಟು, ಕನ್ನಡ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಆಸಕ್ತಿ. ಮಾಳಿಂಗರಾಯನ ಕಾವ್ಯ, ಬುಡಕಟ್ಟು ಸಮಾಜ ಹುಟ್ಟು ಸಾವಿನ ನಡುವೆ ಹಾಗೂ ಸಣ್ಣಾಟದ ಹುಟ್ಟು ಬೆಳವಣಿಗೆ ಈ ಕೃತಿಗಳು ಕನ್ನಡ ವಿ.ವಿ. ಪ್ರಸಾರಾಂಗದಿಂದ ಪ್ರಕಟವಾಗಿವೆ. ಬುಡಗ ಜಂಗಾಲಯ, ಮಾಟ-ಮಂತ್ರ-ಮೋಡಿ, ಆದಿವಾಸಿ ವೈದ್ಯ ಪದ್ಧತಿ ಹಾಗೂ ಜಾನಪದ ರಂಗಭೂಮಿಯಲ್ಲಿ ಮಹಿಳೆ -ಇವು ಸಂಶೋಧನಾ ಲೇಖನಗಳು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳಲ್ಲಿ ವಿಷಯ ಮಂಡಿಸಿದ್ದಾರೆ.

ಗಂಗಾಧರ ದೈವಜ್ಞ

(23 Oct 1964)