About the Author

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಪ್ರಯೋಗಶೀಲ, ಹಿರಿಯ ಲೇಖಕರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡಿರುವ ಅವರು ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ, ಹಲವು ಕಾರ್ಯ ಯೋಜನೆಗಳ ಮೂಲಕ ಎಚ್. ಎಮ್. ಎಮ್. ಸಮಾಜ ಕಾರ್ಯಕ್ಕೆ ಹೊಸದೊಂದು ಆಯಾಮವನ್ನು ಒದಗಿಸಿದ್ದಾರೆ.

ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ ವಿ) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಮ್. ಎ. ಪಡೆದಿರುವದಲ್ಲದೆ ಸಮಾಜಕಾರ್ಯದಲ್ಲಿ ವಾರಣಾಸಿಯ ಮಹಾತ್ಮ ಗಾಂಧೀ ಕಾಶಿ ವಿದ್ಯಾ ಪೀಠ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ್ದಾರೆ. ಜೊತೆಗೆ ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಮಾನವ ಶಾಸ್ತ್ರ ಇವುಗಳ ಅಧ್ಯಾಪನವನ್ನು ಮದ್ರಾಸ್, ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಅವರು ತಮ್ಮ ಭೋದನೆ ವೃತ್ತಿಯಿಂದ 1994ರಲ್ಲಿ ನಿವೃತ್ತರಾದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳ ಆಹಾನ್ವಿತ ಉಪನ್ಯಾಸಕರಾಗಿ ಅಂತಾರಾಷ್ಟ್ರೀಯ ಉಪನ್ಯಾಸಕರಾಗಿ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಂಬಂಧ ಮಂಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿರುವ  ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು ನಲವತ್ತು ಕೃತಿಗಳನ್ನು ಹೊರತಂದಿದ್ದಾರೆ. ಅವರ ಪ್ರಮುಖ ಕೃತಿಗಳು- ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ, ಧಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ, ಸಮಾಜ ಶಾಸ್ತ್ರ: ಕೆಲವು ಒಳನೋಟಗಳು, ಬಿದ್ದುದು ಗರಿಯಲ್ಲ, ಹಕ್ಕಿಯೇ, ಪಂಚಮುಖಿ ಅಭ್ಯುದಯ ಮಾರ್ಗ, ನಿರ್ಮಲ ಕರ್ನಾಟಕ, ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ಧಿ, ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ ಮುಂತಾದವು.

ಎಚ್.ಎಂ. ಮರುಳಸಿದ್ದಯ್ಯ

(29 Jul 1931)