About the Author

ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಹರ್ಷಕುಮಾರ ಅವರು ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತ.  ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಎ. ಪದವೀಧರರಾಗಿರುವ ಹರ್ಷ ಅವರು ನಂತರ ಕಾನೂನು ವ್ಯಾಸಂಗ ನಡೆಸಿದರು. ದ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಕೆಲ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಹರ್ಷ ಅವರು ಸದ್ಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರ ಕೃತಿಯನ್ನು  ’ಮಾತಿಗೆ ಏನು ಕಡಿಮೆ’ ಎಂದು ಕನ್ನಡೀಕರಿಸಿದ್ದಾರೆ. ಮಾಂಗ್‌ ಗಾರುಡಿ ಸಮುದಾಯದ ಬಗ್ಗೆ ಸಂಶೋಧನಾತ್ಮಕ ಸಮಾಜ ಶಾಸ್ತ್ರೀಯ ಗ್ರಂಥ ಪ್ರಕಟಿಸಿದ್ದಾರೆ.

ಹರ್ಷಕುಮಾರ್‌ ಕುಗ್ವೆ

(15 Jul 1981)