About the Author

ಜಗದೀಶ ಮಲ್ಲಪ್ಪ ಹದ್ಲಿ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ  ತಾಲೂಕಿನ ತಿಮ್ಮಾಪೂರದವರು. ತಂದೆ ಮಲ್ಲಪ್ಪ ಶಂಕ್ರಪ್ಪ ಹದ್ಲಿ, ತಾಯಿ ಮಲ್ಲಮ್ಮ ಮಲ್ಲಪ್ಪ ಹದ್ಲಿ. ತಿಮ್ಮಾಪೂರ ಗ್ರಾಮದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಕಾರ್ಯ ದರ್ಶಿಯಾಗಿ, ಹುನಗುಂದದ ಕೃಷಿಕ ಸಮಾಜದ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯರಾಗಿ, ಶರಣ ಸಾಹಿತ್ಯ ಪರಿಷತ್ ಸದಸ್ಯರಾಗಿ, ವಿವಿಧ ಪತ್ರಿಕೆಗಳ ವರದಿಗಾರರಾಗಿ ಸಮಾಜವೀರ, ಸ್ಟೇಟ್ ಎಕ್ಸಪ್ರೆಸ್, ಸೂಪರ ಟೈಮ್ಸ್, ಸುದಿನ ಮುಂತಾದ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕೃಷಿ ಮೂಲತ ಗ್ರಾಮೀಣ ಪತ್ರಕರ್ತನಾಗಿ ವ್ಯಕ್ತಿ ಪರಿಚಯ ಕನ್ನಡ ಸಾಹಿತ್ಯ ಜನಪದ ರಂಗಕಲೆ ಸಾಮಾಜಿಕ ರಾಜಕೀಯ ಕ್ರೀಡೆ ಶರಣಸಾಹಿತ್ಯ ವಚನ ಸಾಹಿತ್ಯ ವಿವಿಧ ಪ್ರಕಾರದ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು: ಶ್ರೀ ಮಾರುತೇಶ್ವರ ಮಹಿಮೆ

ಜಗದೀಶ ಮಲ್ಲಪ್ಪ ಹದ್ಲಿ