About the Author

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಕೆ. ಚಂದ್ರಮೌಳಿಯವರು  ಪ್ರವೃತ್ತಿಯಲ್ಲಿ ಬರಹಗಾರ. ಹರಟೆ, ಹಾಸ್ಯಪ್ರಬಂಧಗಳಿಂದ ಹಿಡಿದು ಪ್ರವಾಸ ಕಥನ, ನಾಟಕ, ಕಾದಂಬರಿ ಮತ್ತು ಸಾಂಸ್ಕೃತಿಕ ಅಧ್ಯಯನಗಳವರೆಗೂ ಇವರ ಸಾಹಿತ್ಯ ವ್ಯಾಪ್ತಿ ಹರಡಿದೆ. ಮರಾಠಿ ಮತ್ತು ಹಿಂದಿ ಭಾಷೆಗಳಿಗೂ ಇವರ ಪ್ರವಾಸ ಕಥನಗಳು ಅನುವಾದವಾಗಿವೆ. ಹರಟೆಗಳಲ್ಲಿ 'ಹೆಂಡತಿಯ ಗುಲಾಮ', ಕಥೆಗಳಲ್ಲಿ 'ಐರಾವತದ ಕಥೆಗಳು', ನಾಟಕಗಳಲ್ಲಿ 'ಪಾರ್ಟಿ', ಸಾಂಸ್ಕೃತಿಕ ಅಧ್ಯಯನಗಳಲ್ಲಿ 'ಬೆಂಗಳೂರಿನ ನೋಟಗಳು' ಮತ್ತು 'ಲ್ಯೂಮಿನಸ್ ಕಾಶಿ ಟು ವೈಬ್ರಟ್ ವಾರಾಣಸಿ' ಪ್ರಮುಖವಾದವು. ಚಂದ್ರಮೌಳಿಯವರದು ಎದುರಿಗೆ ಕೂತು ಮಾತ ನಾಡುವಂತಹ ಆಪ್ತಶೈಲಿ; ಒಮ್ಮೆ ಅರಳಿದ ಮಂದಹಾಸ ಕೊನೆಯವರೆಗೂ ಉಳಿಯುವಂತಹ ಸುರಸ ಹಾಸ್ಯ; ಅಪಾರ ವಿಷಯ ಸಂಗ್ರಹಣೆ, ಸಂಶೋಧನೆಯಿಂದ ಬೆರಗುಗೊಳಿಸುವ ಸಾಂಸ್ಕೃತಿಕ ಅಧ್ಯಯನಗಳು ಇವರ ಬರವಣಿಗೆಯ ವೈಶಿಷ್ಟ್ಯಗಳು.

ಕೆ. ಚಂದ್ರಮೌಳಿ