About the Author

ನಟ, ಸಂಭಾಷಣೆಕಾರ ಹವ್ಯಾಸಿ ಬರಹಗಾರರಾದ ಕೆ. ಮುರಳಿಧರ ಅವರು ದಾಸ ಸಾಹಿತ್ಯದಲ್ಲಿ ಬೇರುಮಟ್ಟದ ಅಧ್ಯಯನ ನಡೆಸಿದ್ದಾರೆ. ಗೊಂಬೆಯಾಟದ ಕಲಾವಿದರಾಗಿ, ನಟ, ಗಾಯಕ, ಸಂಭಾಷಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಪ್ರವಾಸ ಕಥನ ಹಾಗೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ನಾ ಕಂಡ ಅಮೆರಿಕ’ (ಪ್ರವಾಸ ಕಥನ), ಮನದ ಮಾತುಗಳೆಲ್ಲ ಕವಿತೆಯಾದಾಗ (ಕವನ ಸಂಕಲನ), ಗೊಂಬೆಯಾಟಕ್ಕಾಗಿ ಪೌರಾಣಿಕ ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 

ಕೆ. ಮುರಳಿಧರ