About the Author

ಲೇಖಕ ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ ಅವರು ಮೂಲತಃ ಮೈಸೂರಿನ ನಂಜನಗೂಡು ತಾಲ್ಲೂಕಿನ ಕಲ್ಕುಂದ ಗ್ರಾಮದವರು. ಚಳವಳಿಯ ಹಿನ್ನೆಲೆಯಿಂದ ಬಂದ ಇವರು ರಾಗ-ದ್ವೇಷದ ನೆಲೆಗಟ್ಟಿನಿಂದ ಮೇಲೆದ್ದು, ಬುದ್ಧಿಯ ಚುರುಕಿನಿಂದ ವಿವೇಕದ ಹಾದಿಯಲ್ಲಿ ನಡೆದವರು. ದಸಂಸ ನಾಯಕತ್ವ ವಹಿಸಿಕೊಂಡು ಅಸತ್ಯತೆಯನ್ನು ಹರಿತ ನಾಲಿಗೆಯಿಂದ ಖಂಡಿಸಿದ ವ್ಯಕ್ತಿ. ಇವರ ಸಂಶೋಧನಾ ವಿಷಯವೂ ಕೂಡ ಚಳವಳಿ ಕುರಿತಾದ ಅಧ್ಯಯನವೇ. ಇವರ ನಾರಾಯಣ ಗುರುಗಳ ವೈಚಾರಿಕತೆ ಕುರಿತ “ಒಂದೇ ಜಾತಿ-ಒಂದೇ ಧರ್ಮ-ಒಂದೇ ದೇವರು” ಎಂಬ ಕೃತಿಯು ನಾರಾಯಣ ಗುರುಗಳ ಆಧ್ಯಾತ್ಮಿಕ ಚಿಂತನೆಗಳನ್ನು ಸಮರ್ಪಕವಾಗಿ ಬಿಂಬಿಸುತ್ತದೆ.

ಕೆ.ಪಿ. ಮಹಾಲಿಂಗು ಕಲ್ಕುಂದ