About the Author

ಡಾ. ಕೆ ರಮಾನಂದ ಅವರು ಮೈಸೂರಿನವರು. ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಅತ್ಯುನ್ನತ ಅಂಕಗಳನ್ನು ಬಿ.ಎ ಪದವೀಧರರು.  ಬೆಂಗಳೂರು ವಿಶ್ವವಿದ್ಯಾಲಯದಿಂದ 4ನೇ ರ್‍ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವೀಧರರು. ’ ವಿಜಯನಗರ ಕಾಲದ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬುದು ಇವರ ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ, ಪಿಎಚ್.ಡಿ ಪಡೆದಿದ್ದಾರೆ. ಹಂಪಿ ವಿಶ್ವವಿದ್ಯಾಲಯದಲ್ಲಿ  ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರು. ಆಕಾಶವಾಣಿ , ದೂರದರ್ಶನದಲ್ಲಿ ಇವರ ಚಿಂತನೆಗ್ಳೂ ಪ್ರಸಾರವಾಗಿವೆ. ಭಾರತೀಯ ವಿದ್ಯಾಭವನದಲ್ಲಿ ಸಂಶೋಧನ ವಿದ್ವಾಂಸರು. ಪ್ರಸ್ತುತ ಪ್ರತಿಷ್ಠಿತ ಸಿಂಧಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.

 ಕೃತಿಗಳು; ನೆಕ್ಚರ್ ಆಫ್ ಲವ್ ಕೃತಿ ಸೇರಿದಂತೆ ಅವರು 120 ಲೇಖನ, 50 ಕತೆಗಳನ್ನು ಬರೆದಿದ್ದು, 350 ಪುಸ್ತಕ ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಪ್ರಶಸ್ತಿ-ಪುರಸ್ಕಾರಗಳು: ಸುಮಾರು 150 ಪ್ರಶಸ್ತಿಗಳ ಜೊತೆಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿರುತ್ತಾರೆ. ರಜತಸೂರ್ಯ, ವಿದ್ಯಾವಾರಿಧಿ, ಕಾದಂಬರಿಶ್ರೀ, ಕಾದಂಬರಿರತ್ನ, ಶ್ರೀ ಕಾದಂಬರಿ ರತ್ನ ಕರ್ನಾಟಕ ಕುಲತಿಲಕ, ನಾಡುನುಡಿರತ್ನ, ಕಾವ್ಯಶ್ರೀ , ವಚನಶ್ರೀ ಮೊದಲಾದ ಅನೇಕ ಬಿರುದುಗಳು ಲಭಿಸಿವೆ. 

ಕೆ ರಮಾನಂದ

(06 Jun 1957)