About the Author

ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು.  ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ಅಂಕಣ, ಕಲಬುರ್ಗಿಯ ಯುವ ಬರಹಗಾರರ ಬಳಗ ೨೦೧೪ನೇ ಸಾಲಿನ ಅತ್ಯುತ್ತಮ ಬರಹಗಾರ್ತಿ ಪ್ರಶಸ್ತಿ, ಕುಶಲವೇ ಕ್ಷೇಮವೇ? ಕೃತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಾಯಧನ ಮುಂತಾದ ಪ್ರಶಸ್ತಿಗಳು ಇವರನ್ನರಸಿವೆ. ಹಲವು ವರ್ಷಗಳಿಂದ ದೂರದರ್ಶನದಲ್ಲಿ ನಿರೂಪಕಿ, ಭರತನಾಟ್ಯ ಕಲಾವಿದೆ ಎಂಬ ಹೆಗ್ಗಳಿಕೆ ಇವರದು.

ಕೆ.ಎಸ್. ಚೈತ್ರಾ

Awards