About the Author

ಡಾ ಕೊಳ್ಚಪ್ಪೆ ಗೋವಿಂದ ಭಟ್ ಇವರು ಮೂಲತಃ ಗಡಿನಾಡು ಕಾಸರಗೋಡು ತಾಲೂಕಿನ ಕೊಳ್ಚಪ್ಪೆ ಊರಿನವರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವೀಧರರು.  ಸದ್ಯ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ. ಬ್ಯಾಂಕಿನಿಂದ ನಿವೃತ್ತರು. ಆದರೆ, ಬ್ಯಾಂಕ್ ವೃತ್ತಿಪರರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಥೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ಕರಾಡ ಮಾಸ ಪತ್ರಿಕೆಯಲ್ಲಿ ಎರಡು ವರ್ಷಗಳಿಂದ ಹಣಕಾಸು ಮತ್ತು ಅರ್ಥಶಾಸ್ತ್ರದ ಕುರಿತ ಅಂಕಣಕಾರರು. 2016ರ “ಜೇಮ ಕವಿ ಕೆ.ಎಸ್.ನ ಪುರಸ್ಕಾರ' ಪಡೆದಿದ್ದಾರೆ.

ಕೃತಿಗಳು: ಬಿದಿರಿನ ಹೂ (ಕಥಾ ಸಂಕಲನ), ನೆಲಸಂಪಿಗೆ(ಕಥಾ ಸಂಕಲನ) ಮತ್ತು ಜೋಕಾಲಿ (ಕಥಾ ಸಂಕಲನ)

ಕೊಳ್ಚಪ್ಪೆ ಗೋವಿಂದ ಭಟ್