ಜೋಕಾಲಿ

Author : ಕೊಳ್ಚಪ್ಪೆ ಗೋವಿಂದ ಭಟ್

Pages 184

₹ 150.00




Year of Publication: 2020
Published by: ಶ್ರೀ ರಾಮ ಪ್ರಕಾಶನ
Address: ನಂ. 893/D, 3ನೇ ಕ್ರಾಸ್, ಈಸ್ಟರ್ನ್ ಎಕ್ಸ್ಟೆನ್ಷನ್, ನೆಹರು ನಗರ, ಮಂಡ್ಯ - 571401
Phone: 9448930173

Synopsys

ಲೇಖಕ ಕೊಳಚಪ್ಪೆ ಗೋವಿಂದ ಭಟ್ ಅವರ ಕಥಾ ಸಂಕಲನ ‘ಜೋಕಾಲಿ’. ಕೃತಿಗೆ ಮುನ್ನುಡಿ ಬರೆದ ವಸಂತಕುಮಾರ ಪೆರ್ಲ ‘ಇಲ್ಲಿರುವ ಹದಿನೈದು ಕಥೆಗಳೂ ಒಂದಿಲ್ಲೊಂದು ಕಾರಣಕ್ಕೆ ಓದಿನ ಖುಷಿ ನೀಡುತ್ತವೆ. ತಾಂತ್ರಿಕತೆಯ ಅತಿಭಾರದಿಂದ ಯಾವ ಕಥೆಯೂ ಒಜ್ಜೆಯಾಗಿಲ್ಲ ಎಂಬ ಅಂಶವನ್ನು ಗಮನಿಸಬೇಕು. ಎಲ್ಲ ಕಥೆಗಳ ವಸ್ತು ದೈನಂದಿನ ಕೌಟಂಬಿಕ - ಸಾಮಾಜಿಕ ಬದುಕಿಗೆ ಸಂಬಂಧಿಸಿವೆ.  ಕಥೆಗಾಗಿ ಕಥೆ ಎಂಬಂತಿರದೆ ಸ್ವಾನುಭವದ ಅಸ್ಥೆಗೆ ಸಾಮಾಜಿಕ ಬದುಕಿನ ಸಮಗ್ರಾನುಭವದ ರಕ್ತ ಮಾಂಸ ತುಂಬಿದಂತಿದೆ. ತನ್ನ ಬಾಲ್ಯಕಾಲದ ನೆನಪಿನ ಯಾವ ಭಾರಗಳನ್ನೂ ತರದೆ, ಇವತ್ತಿನ ಸಂಗತಿಗಳನ್ನು ಸುಸಂಗತಗೊಳಿಸಿರುವುದು ಗಮನಿಸಬೇಕಾದ ಪ್ರಧಾನ ಸಂಗತಿಯಾಗಿದೆ.’ ಎಂದು ಪ್ರಶಂಸಿದ್ದಾರೆ.

About the Author

ಕೊಳ್ಚಪ್ಪೆ ಗೋವಿಂದ ಭಟ್

ಡಾ ಕೊಳ್ಚಪ್ಪೆ ಗೋವಿಂದ ಭಟ್ ಇವರು ಮೂಲತಃ ಗಡಿನಾಡು ಕಾಸರಗೋಡು ತಾಲೂಕಿನ ಕೊಳ್ಚಪ್ಪೆ ಊರಿನವರು. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವೀಧರರು.  ಸದ್ಯ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ. ಬ್ಯಾಂಕಿನಿಂದ ನಿವೃತ್ತರು. ಆದರೆ, ಬ್ಯಾಂಕ್ ವೃತ್ತಿಪರರಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಕಥೆ, ಕವಿತೆ, ಲೇಖನಗಳು ಪ್ರಕಟವಾಗಿವೆ. ಕರಾಡ ಮಾಸ ಪತ್ರಿಕೆಯಲ್ಲಿ ಎರಡು ವರ್ಷಗಳಿಂದ ಹಣಕಾಸು ಮತ್ತು ಅರ್ಥಶಾಸ್ತ್ರದ ಕುರಿತ ಅಂಕಣಕಾರರು. 2016ರ “ಜೇಮ ಕವಿ ಕೆ.ಎಸ್.ನ ಪುರಸ್ಕಾರ' ಪಡೆದಿದ್ದಾರೆ. ಕೃತಿಗಳು: ಬಿದಿರಿನ ಹೂ (ಕಥಾ ಸಂಕಲನ), ನೆಲಸಂಪಿಗೆ(ಕಥಾ ಸಂಕಲನ) ಮತ್ತು ಜೋಕಾಲಿ (ಕಥಾ ಸಂಕಲನ) ...

READ MORE

Related Books