About the Author

ಗೋವಾ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಎಂ. ಡಿ. ಸೂರ್ಯಕಾಂತ ಅವರು ಹವ್ಯಾಸಿ ಬರಹಗಾರರು. ಸಾಹಿತ್ಯದೆಡೆಗಿನ ಒಲವು ಮಕ್ಕಳ ಆರೋಗ್ಯ ಪಾಲನೆ ಕೃತಿ ರಚಿಸಲು ಸಹಕಾರಿಯಾಯಿತು.

ಇವರು ಬಳ್ಳಾರಿಯ ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿಎಸ್, ಕಲಬುರ್ಗಿಯ ಎಂ. ಆರ್. ವೈದ್ಯಕೀಯ ಮಹಾವಿದ್ಯಾಲಯದಿಂದ ಮಕ್ಕಳ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರಾಗಿ ಸೇವೆ ನಂತರ, ಆರೋಗ್ಯ ಇಲಾಖೆಯ ಅಪರ ನಿದೇಶಕರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಎಂ.ಡಿ. ಸೂರ್ಯಕಾಂತ