About the Author

ಮರ್ಗನಳ್ಳಿ ಪ್ರಕಾಶ ಅವರು ಮೂಲತಃ ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿ (ಮ‌ರ್ಗನಳ್ಳಿ)ಯವರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅವರು, ಕಾಲೇಜು ದಿನಗಳಲ್ಲಿ ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದು, ಆ ನಂತರ ಅದರ ಮುಂದುವರಿಕೆಯಾಗಿ ಪತ್ರಿಕೋದ್ಯಮದತ್ತ ಹೊರಳಿದರು. ಸ್ವಲ್ಪಕಾಲ ಅಂಕಣಕಾರರಾಗಿಯೂ ಗಮನ ಸೆಳೆದರು. ಪ್ರಸ್ತುತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರಕಾಶ್ ತಮ್ಮ ಕುಟುಂಬದೊಂದಿಗೆ ಲವಲವಿಕೆಯ ಬದುಕಿನಲ್ಲಿದ್ದಾರೆ.

ಮರ್ಗನಳ್ಳಿ ಪ್ರಕಾಶ