About the Author

ತಿಪಟೂರು ತಾಲ್ಲೂಕಿನ ನಾಗರಘಟ್ಟದಲ್ಲಿ ಜನಿಸಿದ್ದ (1974) ಎನ್.ಕೆ. ಹನುಮಂತಯ್ಯ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಎನ್ಕೆ ಕಿರಿಯ ವಯಸ್ಸಿನಲ್ಲಿಯೇ (2010) ತೀರಿಹೋದರು. ಹಿಮದ ಹೆಜ್ಜೆ (ಕವನ ಸಂಕಲನ- 2001), ಚಿತ್ರದ ಬೆನ್ನು (ಕವನ ಸಂಕಲನ-  2006), ಎಂ.ವಿ. ವಾಸುದೇವರಾವ್ (ವ್ಯಕ್ತಿಚಿತ್ರ- 2000), ಕ್ರಾಂತಿ ವಸಂತ (ಬಿ.ಬಸವಲಿಂಗಪ್ಪನವರ ವ್ಯಕ್ತಿಚಿತ್ರ), ಜಲಸ್ತಂಭ (ನಾಟಕ- 2005) ಪುಸ್ತಕಗಳನ್ನು ಪ್ರಕಟಿಸಿದ್ದರು. ಊರು ಕೇರಿ ಪತ್ರಿಕೆಯ ಸಂಪಾದಕರು ಆಗಿದ್ದರು.

ಎನ್ಕೆ ಹನುಮಂತಯ್ಯ