About the Author

ನಗು ಜಯಮಂಗಲ- ಕಾವ್ಯನಾಮದಿಂದ ನ.ಗುರುಮೂರ್ತಿ ಜಯಮಂಗಲ ಅವರು ಪರಿಚಿತರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಜಯಮಂಗಲ ಗಡಿ (ಜನನ: 01-07-1969) ಗ್ರಾಮದವರು.ತಂದೆ ದಿ.ನಲ್ಲಪ್ಪ ತಾಯಿ ಮುನಿಯಮ್ಮ. ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಸಂಕೀರ್ಣದ ಸಿದ್ದನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಕೋಲಾರ ಜಿಲ್ಲೆಯ ದಲಿತ ಚಳವಳಿಗಳಲ್ಲಿ ಭಾಗವಹಿಸಿದ ಅನುಭವಗಳೊಂದಿಗೆ ಸಾಹಿತ್ಕಾಸಕ್ತಿ ಬೆಳೆಸಿಕೊಂಡಿದ್ದರ ಫಲವಾಗಿ  'ಹೆಬ್ಬೆರಳ ಬೆವರು' ಕವನ ಸಂಕಲನ (2016) ಪ್ರಕಟಿಸಿದ್ದು,  ಈ ಕೃತಿಯು ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಪಡೆದಿದೆ. 2018 ರಲ್ಲಿ ಪ್ರಕಟಿತ ಮತ್ತೊಂದು ಕವನ ಸಂಕಲನ-'ಅರ್ಜಿ ಹಾಕಿ ಹುಟ್ಟಿದವರ ನಡುವೆ' . ಅದಕ್ಕೂ ಅದೇ ಸಾಲಿನ ರಾಜ್ಯಮಟ್ಟದ ಕ.ಸಾ.ಪ ನಾ.ಕು.ಗಣೇಶ್ ದತ್ತಿ ಹಾಗೂ 'ಅವ್ವ' ಪ್ರಶಸ್ತಿ ಲಭಿಸಿದೆ.

ನ. ಗುರುಮೂರ್ತಿ ಜಯಮಂಗಲ

(01 Jul 1969)