About the Author

ಹೂವಿನಹಳ್ಳಿ ನಾಗರಾಜ ಅವರು  ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢ ಶಾಲಾ ಶಿಕ್ಷಣವನ್ನು ಬಂದರವಾಡ ಗ್ರಾಮದಲ್ಲಿ, ಪಿಯುಸಿ ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರೈಸಿ ಮೈಸೂರು ಮುಕ್ಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದು ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. 

ಹಲಿಗೆ ದ್ಯಾವಪ್ಪ ಮತ್ತು ಇತರ ಕಥೆಗಳು’ ‘ಬಿರುಕು’ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಕರ್ನಾಟಕ ಸಂಧ್ಯಾಕಾಲ ಹಾಗೂ ಸಂಜೆವಾಣಿ ಸಂಜೆ ದಿನಪತ್ರಿಕೆಗಳಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

ಸುಧಾ, ಕರ್ಮವೀರ, ಅಗ್ನಿ, ಸುದ್ದಿಮೂಲ, ಜನವಾಣಿ, ಸಂಜೆವಾಣಿ ಸೇರಿದಂತೆ ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕಥೆ, ಕವಿತೆ ಪ್ರಕಟವಾಗಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ ನಾಲ್ಕನೇ ಸೆಮಿಸ್ಟರ್ ಮತ್ತು ಬಿಬಿಎಂ ದ್ವಿತೀಯ ಸೆಮಿಸ್ಟರ್ ಗೆ ಅವರ ‘ಬಲಿ’ ಕಥೆ ಪಠ್ಯವಾಗಿದೆ.

ನಾಗರಾಜ ಹೂವಿನಹಳ್ಳಿ