About the Author

ಪ್ರಭಾಕರ ಬಿಳ್ಳೂರು ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು (ಜನನ: 01-12-1938) ಅಥಣಿಯಲ್ಲೇ ಪಿಯುಸಿ ನಂತರ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಎಂಎ. ತದನಂತರ ಬಿ.ಇಡಿ ಪದವಿ ಪಡೆದರು. ಶಿರುಗುಪ್ಪಿಯ  ಶ್ರೀ ಸಿದ್ದೇಶ್ವರ ವಿದ್ಯಾಲಯದ ಮುಖ್ಯೋಪಾಧ್ಯಯರಾಗಿ ನಿವೃತ್ತರಾದರು.

ಇವರ ಮೊದಲ ನಾಟಕ-ಶ್ರೀ ಧರ್ಮ ರಕ್ಷಕ ಮಹಾವೀರ’. ಮೊದಲ ಕವನ ಸಂಕಲನ-ತಿಳಿನೀರು. ಪೂಜ್ಯ ಮಾತಾಜಿ ಪ್ರಕಾಶನ ಸಂಸ್ಥೆಯೊಂದನ್ನುಸ್ಥಾಪಿಸಿದ್ದರು. ಮಿರ್ಜಿ ಅಣ್ಣಾರಾಯರ ಚಂದ್ರಗಂಗಾ ಜ್ಞಾನಪೀಠ ಪ್ರಕಾಶನವು ಇವರ ‘ತಿಳಿನೀರು’ ಕವನ ಸಂಕಲನವನ್ನು ಪ್ರಕಟಿಸಿತ್ತು. ಸಿಂಪಿಯೊಡೆದ ಮುತ್ತುಗಳು-ಎಂಬುದು ಇವರ ಮತ್ತೊಂದು ಕವನ ಸಂಕಲನ. 2019ರ ಫೆಬ್ರವರಿ 13 ರಂದು ನಿಧನರಾದರು.

ಪ್ರಭಾಕರ ಬಿಳ್ಳೂರು

(01 Dec 1938-13 Feb 2019)