About the Author

ಪತ್ರಕರ್ತ, ಲೇಖಕ ಪ್ರಸನ್ನ ಕರ್ಪೂರ ಅವರು 2005ರಲ್ಲಿ ಪತ್ರಿಕೋದ್ಯಮಕ್ಕೆ ಹೆಜ್ಜೆ ಇಟ್ಟರು. ಸಂಯುಕ್ತ ಕರ್ನಾಟಕ, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಕಸ್ತೂರಿ ವಾಹಿನಿ, ಕನ್ನಡಪ್ರಭ, ಹೊಸದಿಗಂತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ವಿಜಯ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯಲ್ಲಿ ಪ್ರಧಾನ ಉಪಸಂಪಾದಕರಾಗಿದ್ದಾರೆ. ಅರಣ್ಯ, ಕೃಷಿ, ಸಿನಿಮಾ, ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ ‘ಬಿಡುಗಡೆಯ ಬೇಡಿ’ ಎಂಬ ವಿನೂತನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ 2008ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ಸಂದಿದೆ. ಉತ್ತರ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಓಡಾಡಿ ಜೈಲಿನಿಂದ ಬಿಡುಗಡೆಯಾದ ನಂತರ ಕೈದಿಗಳ ಜೀವನ ಸ್ಥಿತಿ ಗತಿ ಮತ್ತು ಅಪರಾಧಿ ಜೈಲಿನಲ್ಲಿರುವಾಗ ಆತ ಅಥವಾ ಆಕೆಯ ಕುಟುಂಬದ ವ್ಯಥೆಯ ಕಥೆಯನ್ನು ವರದಿ ಮಾಡಿರುವುದು ಬಿಡುಗಡೆಯ ಬೇಡಿಯ ವಿಶೇಷ. 2012ರಲ್ಲಿ ಪತ್ರಿಕಾ ಲೇಖನಗಳ ಸಂಕಲನ ‘ಅಂತರಂಗದ ಮೃದಂಗ, ‘ಕಾಡ ಕಸ್ತೂರಿ’ ಕೃತಿಗಳು ಪ್ರಕಟಗೊಂಡಿದೆ.

ಪ್ರಸನ್ನ ಕರ್ಪೂರ