About the Author

ಲೇಖಕ ಪ್ರವೀಣ್ ಬಿ.ಎಂ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಿಳಸನೂರಿನವರು. 1983 ಮಾರ್ಚ್ 10 ರಂದು ಜನನ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಬುಗುರಿ (ನಿ.ಮೈಮ್ ರಮೇಶ್), ನಿರಾಕರಣ (ನಿ.ಮೈಮ್ ರಮೇಶ್), ಥ್ಯಾಂಕ್ಯೂ ಮಿಸ್ಟರ್ ಗ್ಲಾಡ್ (ನಿ.ಮೈಮ್ ರಮೇಶ್), ಹೆಣದ ಬಟ್ಟೆ (ಪ್ರೇಮಚಂದ್ರ ಕಾದಂಬರಿ ಆಧಾರಿತ, ನಿರ್ದೇಶನ ಜನ್ನಿ), ಜಲಗಾರ (ನಿ. ಕೃಷ್ಣ ಜನಮನ), ಸಾಂಬಶಿವ ಪ್ರಹಸನ(ಡಾ.ಚಂದ್ರಶೇಖರ ಕಂಬಾರ, ನಿ.ಶೇಖ್ ಅಹಮದ್) ನಾಟಕಗಳಲ್ಲಿ ಅಭಿನಯಿಸಿರುತ್ತಾರೆ.

ಕೃತಿಗಳು: ನೆಲಮುಟ್ಟದ ಕೂಗು, ನೆಲದ ಹುಣ್ಣು, ಮಾತಿಲ್ಲ ಗುರುತು ಇದೆ

ಪ್ರವೀಣ್ ಬಿ.ಎಂ

(10 Mar 1983)