About the Author

ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್.ಕೆ. ಶಾನಭೋಗ) ಅವರು ಧಾರವಾಡದವರು. (ಜನನ: 04-07-1957)  ಬಿ.ಕಾಂ ಪದವೀಧರರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. ‘ಅಪೂರ್ವ -ಇವರ ಮೊದಲ ಮಕ್ಕಳ ನಾಟಕವಾಗಿದ್ದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಕ್ಕಳ ರತ್ನ ಪ್ರಶಸ್ತಿ ಪಡೆದಿದೆ.  ‘ಪಾರಿತೋಷ’ ಎಂಬುದು ಇವರ ನಾಟಕ .ರಾಜ್ಠದಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.  ಅಂಟಾರ್ಕಟಿಕಾ-ಇದು ಮೊದಲ ಮಕ್ಕಳ ಕಾದಂಬರಿ . 2012ರಲ್ಲಿ ಉಪ್ಪಿನಕಾಯಿಯ ಅತ್ತೆ ಎಂಬ ಮಕ್ಕಳ ನಾಟಕವಾಗಿದ್ದು, ಮಕ್ಕಳ ಕವನಗಳನ್ನು ಸಹ ರಚಿಸಿದ್ದಾರೆ.

2001ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರಾಗಿದ್ದರು. ಮಹಾರಾಷ್ಟ್ರ ರಾಜ್ಯದ 8ನೇ ತರಗತಿಯ ಪಠ್ಯದಲ್ಲಿ ಇವರ ‘ಕಡಲ ತೀರ’ ಎಂಬ ಕವನ ಸೇರ್ಪಡೆಯಾಗಿದೆ. 

ಅರ್.ಕೆ. ಶಾನಭೋಗ

(04 Jul 1957)