About the Author

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಪುಲಿಪಾಪೇನಹಳ್ಳಿಯವರಾದ ಕೇಶವ ಮೂರ್ತಿ ಅವರು ಕೋಲಾರದಲ್ಲಿ ಹಾಗೂ  ಶಿವಮೊಗ್ಗದಲ್ಲಿ ಶಿಕ್ಷಣ ಪಡೆದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ನಮ್ಮನಾಡು, ಕ್ರಾಂತಿದೀಪ, ಜನಹೋರಾಟ, ಈಟಿವಿ, ಉದಯವಾಣಿ ಪತ್ರಿಕೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕನ್ನಡ ಪ್ರಭಾ ದಿನಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಗಾಂಧಿ ಸೀಟು, ಕಲಾಭಿಮಾನಿ ಬಾಲಣ್ಣ ಹಾಗೂ ಗೇಟ್ ಕೀಪರ್ ಇವರು ಬರೆದ ಪ್ರಮುಖ ಕೃತಿಗಳು. 

ಆರ್‌. ಕೇಶವಮೂರ್ತಿ