About the Author

ಪತ್ರಕರ್ತ- ಅಂಕಣಕಾರ ರಾಧಾಕೃಷ್ಣ ಎಸ್. ಭಡ್ತಿ ಅವರು ನೀರು ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವಿರತವಾಗಿ ಬರೆಯುತ್ತಿರುವ ಲೇಖಕ. ಅವರ ಬಹುತೇಕ ಬರೆಹಗಳು ನೀರಿಗೆ ಸಂಬಂಧಿಸಿದವುಗಳಾಗಿರುವುದು ವಿಶೇಷ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರು ಸಂಗ್ರಹದ ಪಾರಂಪರಿಕ ವಿಧಾನಗಳನ್ನು ಅಂಕಣಗಳನ್ನು ಬರೆದು ಪ್ರಕಟಿಸಿರುವ ಭಡ್ತಿ ಅವರು ಸದ್ಯ ’ಹಸಿರುವಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ನೀರನ್ನು ಕುರಿತ ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ.

ರಾಧಾಕೃಷ್ಣ ಎಸ್. ಭಡ್ತಿ

(15 Feb 1971)